ಮೂಡುಬಿದಿರೆ: ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಛಾಯಾಗ್ರಾಹಕರಿಂದ ರಕ್ತದಾನ

Update: 2019-08-19 18:05 GMT

ಮೂಡುಬಿದಿರೆ, ಆ.19: ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ  ಸೌತ್‍ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಡುಬಿದಿರೆ ವಲಯ ಮತ್ತು  ಆಳ್ವಾಸ್ ಆಸ್ಪತ್ರೆಯಲ್ಲಿರುವ ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್' ಸಹಯೋಗದಲ್ಲಿ  ಸೋಮವಾರ ರಕ್ತದಾನ ಶಿಬಿರ ನಡೆಯಿತು. 

ರಕ್ತದಾನ ಶಿಬಿರವನ್ನು ಉದ್ಘಾಟಿಸಿದ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ರಿ. ಇದರ ಟ್ರಸ್ಟಿ ಡಾ| ಎಂ. ವಿನಯ ಆಳ್ವ ಅವರು ರಕ್ತದಾನದ ಮಹತ್ವ ವಿವರಿಸಿ, ವಿಶ್ವ ಛಾಯಾಗ್ರಹಣ ದಿನಾಚರಣೆಯಂದು ಛಾಯಾಗ್ರಾಹಕರು ರಕ್ತದಾನಗೈದಿರುವುದು ಶ್ಲಾಘನೀಯ ಎಂದರು. 

ಸೌತ್‍ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮೂಡುಬಿದಿರೆ ವಲಯಾಧ್ಯಕ್ಷ ರವಿ ಕೋಟ್ಯಾನ್, ಗೌರವಾಧ್ಯಕ್ಷ ಭಾನುಪ್ರಕಾಶ್ ರಾವ್,
ಉಪಾಧ್ಯಕ್ಷ ಸುನಿಲ್ ಕೋಟ್ಯಾನ್, ಪ್ರ. ಕಾರ್ಯದರ್ಶಿ ನಿತಿನ್ ಬೆಳುವಾಯಿ, ಜತೆ ಕಾರ್ಯದರ್ಶಿ ಮನೋಜ್ ಪುತ್ತಿಗೆ, ಕೋಶಾಧಿಕಾರಿ ರಿತೇಶ್ ಸಾಲ್ಯಾನ್ ಮತ್ತು ದಶಮಾನೋತ್ಸವ ಸಮಿತಿ ಸಂಚಾಲಕ ವಿಲ್ರೆಡ್ ಮೆಂಡೊನ್ಸಾ,  ಪದಾ„ಕಾರಿಗಳ ಸಹಿತ ವಲಯದ ಸದಸ್ಯರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News