ಪಾಕ್ ನಿಂದ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ
Update: 2019-08-20 16:30 GMT
ಜಮ್ಮು, ಆ. 20: ಜಮ್ಮು ಹಾಗೂ ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿನಿಯಂತ್ರಣ ರೇಖೆಯಲ್ಲಿರುವ ಮುಂಚೂಣಿ ಠಾಣೆ ಹಾಗೂ ಗ್ರಾಮಗಳ ಮೇಲೆ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯಿಂದ ಸೇನೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ. ನಾಲ್ವರು ಯೋಧರು ಗಾಯಗೊಂಡಿದ್ದಾರೆ.
ಪೂಂಛ್ನ ಕೃಷ್ಣ ಘಾಟಿ ಹಾಗೂ ಮೆಂಧರ್ ವಲಯದಲ್ಲಿ ಪಾಕಿಸ್ತಾನ ಪೂರ್ವಾಹ್ನ 11 ಗಂಟೆಗೆ ಕದನ ವಿರಾಮ ಉಲ್ಲಂಘಿಸಿತು. ಸಣ್ಣ ಶಸ್ತ್ರಾಸ್ತ್ರ ಹಾಗೂ ಮೋರ್ಟಾರ್ ಶೆಲ್ಗಳ ಮೂಲಕ ದಾಳಿ ನಡೆಸಿತು. ಇದಕ್ಕೆ ಭಾರತದ ಸೇನೆ ಸಮರ್ಥ ಪ್ರತ್ಯುತ್ತರ ನೀಡಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಮೃತಪಟ್ಟ ಯೋಧನನ್ನು ನಾಯ್ಕ ರವಿ ರಂಜನ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಬಿಹಾರದ ಗೋಪೆ ಬಿಘಾ ಗ್ರಾಮದವರು. ಅವರು ಪತ್ನಿ ರಿತಿ ದೇವೆಯನ್ನು ಅಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.