ಆ.22ರಂದು ಶರಫುಲ್ ಉಲಮ ಅನುಸ್ಮರಣೆ

Update: 2019-08-21 14:51 GMT

ಕುಂದಾಪುರ, ಆ.21: ಕುಂದಾಪುರ ಐ.ಬಿ.ಟಿ. ಗಾರ್ಡನ್ ಆಶ್ರಯದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ನಾಯಕ ಶರಫುಲ್ ಉಲಮ ಅಬ್ಬಾಸ್ ಉಸ್ತಾದ್ ಅನುಸ್ಮರಣೆ ಹಾಗೂ ದುಅ ಮಜ್ಲಿಸ್ ಕಾರ್ಯಕ್ರಮ ಆ.22ರಂದು ಅಪರಾಹ್ನ 2 ಗಂಟೆಗೆ ಕೋಟೇಶ್ವರ ಮೂಡು ಗೋಪಾಡಿಯ ಸಖಾಫಿಯ್ಯ ವಿಮೆನ್ಸ್ ಅಕಾಡೆಮಿ ಕ್ಯಾಂಪಸ್ನಲ್ಲಿ ಜರಗಲಿದೆ.

ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್‌ಹಾಜ್ ಬೇಕಲ್ ಉಸ್ತಾದ್ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಬಿ.ಟಿ ಗಾರ್ಡನ್ ಅಧ್ಯಕ್ಷ ಅಸ್ಸಯ್ಯಿದ್ ಕೋಟೇಶ್ವರ ತಂಙಳ್ ವಹಿಸಲಿರುವರು ಎಂದು ಪ್ರಧಾನ ಕಾರ್ಯದರ್ಶಿ ಬಿ.ಎಂ.ನಾಸಿರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News