‘ಜರ್ನಲಿಸಂ ಕೋನ್‌ಕ್ಲೇವ್’ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Update: 2019-08-21 15:25 GMT

ಮಂಗಳೂರು, ಆ.21: ನಗರದ ಸಂತ ಆಗ್ನೇಸ್ ವಿದ್ಯಾಸಂಸ್ಥೆಯ ಪತ್ರಿಕೋದ್ಯಮ ಹಾಗು ಸಮೂಹ ಸಂವಹನ ವಿಭಾಗದ ವತಿಯಿಂದ ‘ಜರ್ನಲಿಸಂ ಕೋನ್‌ಕ್ಲೇವ್’ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಸ್ಟರ್ ಡಾ. ಜೆಸ್ವೀನ ಎ.ಸಿ. ಮಾತನಾಡಿ ಮಕ್ಕಳಿಗೆ ಸಾಧಿಸುವ ಛಲ ಬಹುಮುಖ್ಯ. ಭವಿಷ್ಯದ ಬಗ್ಗೆ ದೂರದೃಷ್ಟಿ ಇದ್ದರೆ ಸಾಧನೆ ಖಂಡಿತ ಎಂದರು.

‘ವುಮೆನ್ ಇನ್ ಜರ್ನಲಿಸಂ’ ವಿಚಾರದಲ್ಲಿ ಗೋಷ್ಠಿ ನಡೆಯಿತು. ದಿಶಾ ಪ್ರಭು ಹಾಗೂ ಆರ್ಜುನ್ ಡಿಸೋಜ ‘ಡಿಜಿಟಲ್ ಮಾರ್ಕೆಟಿಂಗ್ ಆ್ಯಂಡ್ ಕೆರಿಯರ್ ಇನ್ ಜರ್ನಲಿಸಂ’ ವಿಚಾರದಲ್ಲಿ ಮಾತನಾಡಿದರು.

ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ದೀಕ್ಷಿತಾ ಪ್ರಶಾಂತ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷೆ ಸಂಧ್ಯಾ ಡಿಸೋಜ ಅತಿಥಿಯನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News