ಮಹಿಳೆ ಮತ್ತು ದಲಿತ ಯುವಕನಿಗೆ ಥಳಿತ, ಚಪ್ಪಲಿಗಳ ಮಾಲೆ ತೊಡಿಸಿ ಮೆರವಣಿಗೆ

Update: 2019-08-22 14:24 GMT

ಚಂಡಿಗಡ,ಆ.22: ಅನೈತಿಕ ಸಂಬಂಧದ ಆರೋಪದಲ್ಲಿ ಮಹಿಳೆ ಮತ್ತು ದಲಿತ ಯುವಕನನ್ನು ಥಳಿಸಿ,ಚಪ್ಪಲಿಗಳ ಮಾಲೆಗಳನ್ನು ತೊಡಿಸಿ ಮುಖಕ್ಕೆ ಕಪ್ಪು ಬಳಿದು ಮೆರವಣಿಗೆ ಮಾಡಿರುವ ಘಟನೆ ಬುಧವಾರ ಹರ್ಯಾಣದ ಕರ್ನಾಲ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಯುವಕನ ಕುಟುಂಬವು ಪೊಲೀಸ್ ದೂರನ್ನು ದಾಖಲಿಸಿದೆ.

ಕೆಲವು ಗ್ರಾಮಸ್ಥರ ಬೆಂಬಲದೊಂದಿಗೆ ಮಹಿಳೆಯ ಸಂಬಂಧಿಗಳು ಈ ಜೋಡಿಯನ್ನು ಹಿಡಿದು ಥಳಿಸಿದ್ದಾರೆ. ಅವರ ಕುತ್ತಿಗೆಗೆ ಚಪ್ಪಲಿ ಮಾಲೆಗಳನ್ನು ತೊಡಿಸಿ,ಮುಖಕ್ಕೆ ಕಪ್ಪು ಬಳಿದು ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಯುವಕನ ಕುಟುಂಬ ಸದಸ್ಯರು ಸುದ್ದಿಗಾರರಿಗೆ ತಿಳಿಸಿದರು. ಕೆಲವು ಗ್ರಾಮಸ್ಥರು ಘಟನೆಯ ವೀಡಿಯೊ ಮಾಡಿದ್ದಾರೆ ಎಂದೂ ಅವರು ಆರೋಪಿಸದರು.

ಕೆಲವು ಗ್ರಾಮಸ್ಥರು ಮತ್ತು ಮಹಿಳೆಯ ಸಂಬಂಧಿಗಳ ವಿರುದ್ಧ ದೂರನ್ನು ದಾಖಲಿಸಿಕೊಂಡಿದ್ದು,ತನಿಖೆಯು ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News