ಕಾಟಿಪಳ್ಳ ಗಾಯಿಸ್ ಇಲೆವೆನ್ ಯೂತ್ ಕೌನ್ಸಿಲ್ ವತಿಯಿಂದ ನೆರೆ ಪರಿಹಾರ ನಿಧಿಗೆ ಕೊಡುಗೆ

Update: 2019-08-22 17:58 GMT

ಕಾಟಿಪಳ್ಳ : ಮಹಾನಗರ ಪಾಲಿಕೆ 3ನೇ ವಾರ್ಡಿನ ಕಾಟಿಪಳ್ಳ ಎರಡನೇ ಬ್ಲಾಕಿನಲ್ಲಿ ನೂತನವಾಗಿ ಸ್ಥಾಪಿತಗೊಂಡ 'ಗಾಯಿಸ್ ಇಲೆವೆನ್ ಯೂತ್ ಕೌನ್ಸಿಲ್' ವತಿಯಿಂದ ಕಾಟಿಪಳ್ಳ ಹಾಗೂ ಕೈಕಂಬ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಸಂಗ್ರಹಿಸಿದ 20,222 ರೂ. ಸಹಾಯ ಧನವನ್ನು  ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಲ್ಲಿ ನೀಡಲಾಯಿತು.

ನಿಯೋಗದ ಮುಂದಾಳುತ್ವವನ್ನು ಮಾಜಿ ಕಾರ್ಪೊರೇಟರ್ ಹಾಜಿ ಪಿ.ಬಶೀರ್ ಅಹಮದ್ ವಹಿಸಿದ್ದರು. ಸಂಘದ ಅಧ್ಯಕ್ಷ ಮೊಹಮ್ಮದ್ ಶಮೀರ್, ಉಪಾಧ್ಯಕ್ಷ ಅಬ್ದುಲ್ ಲತೀಫ್ ಕೆ.ಎಂ.,ಪದಾಧಿಕಾರಿಗಳಾದ ಮೊಹಮ್ಮದ್ ಶಾಹಿಲ್, ಅಶ್ರಫ್ ಎಸ್.ಎ., ಸಮೀರ್, ಜಂಶೀರ್, ಯಾಸಿರ್, ಶಕೀಲ್, ಮೊಹ್ಸಿನ್, ಆಸಿಫ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News