ಬಿಶಾರತುಲ್ ಮದೀನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ

Update: 2019-08-23 11:41 GMT

ಮಂಗಳೂರು: ಮಂಜನಾಡಿ ಅಲ್ ಮದೀನ ಸಿಬ್ಬಂದಿ ರವೂಫ್ ಉಸ್ತಾದರನ್ನು ಕೆಲವೊಂದು ಮಾಧ್ಯಮಗಳು, ಪತ್ರಿಕೆಗಳು ಉಗ್ರವಾದಿ, ಭಯೋತ್ಪಾದಕ ನೆಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದು, ತಪ್ಪು ಅರಿವಾದ ಬಳಿಕ ಕ್ಷಮೆ ಕೇಳುವಷ್ಟು ಸೌಜನ್ಯವಿಲ್ಲ. ಮಾಧ್ಯಮಗಳು, ಪತ್ರಿಕೆಗಳು ಅಮಾಯಕರನ್ನು ಬಲಿಪಶುಗಳನ್ನಾಗಿಸುತ್ತಿವೆ ಎಂದು ಆರೋಪಿಸಿ ಸಂಸ್ಥೆಯ ವಿದ್ಯಾರ್ಥಿ ಸಂಘಟನೆ ವತಿಯಿಂದ ಕ್ಯಾಂಪಸ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಸ್ಥೆಯ ಅಧ್ಯಾಪಕ ಇಕ್ಬಾಲ್ ಮರ್ಝೂಖಿ ಸಖಾಫಿ, ಸಹದ್ ಮೋಂಟುಗೋಳಿ, ಸಮದ್ ಪರಪ್ಪು ಮಾತಾಡಿದರು. ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ನಿಝಾರ್ ಬಕ್ರವಳ್ಳಿ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News