ಹಳೆಯಂಗಡಿ: ರೈಲು ಢಿಕ್ಕಿ ಹೊಡೆದು ಆಟೊ ರಿಕ್ಷಾ ಚಾಲಕ ಮೃತ್ಯು

Update: 2019-08-23 09:08 GMT

ಹಳೆಯಂಗಡಿ, ಆ.23: ಹಳಿ ದಾಟುತ್ತಿದ್ದ ವೇಳೆ ಹಠಾತ್ ಆಗಿ ಬಂದ ರೈಲು ಢಿಕ್ಕಿ ಹೊಡೆದ ಪರಿಣಾಮ ಆಟೊ ರಿಕ್ಷಾ ಚಾಲಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹಳೆಯಂಗಡಿ ಸಮೀಪದ ಕೊಪ್ಪಳ  ರೈಲ್ವೆ ಮೇಲ್ಸೇತುವೆ ಬಳಿ ನಡೆದಿದೆ.

ಹಳೆಯಂಗಡಿಯಲ್ಲಿ ರಿಕ್ಷಾ ಚಾಲಕರಾಗಿದ್ದ ನವೀನ್ ಕರ್ಕಡ ಮೃತಪಟ್ಟವರು. ಇವರು ಹಳಿ ದಾಟುತ್ತಿದ್ದ ವೇಳೆ ಮುಂಬೈಯಿಂದ ಮಂಗಳೂರಿಗೆ ಬರುತ್ತಿದ್ದ ಮತ್ಸ್ಯಗಂಧಾ ಎಕ್ಸ್ ಪ್ರೆಸ್ ರೈಲು ಢಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News