ಇನ್ನು ಭಾರತದೊಂದಿಗೆ ಮಾತನಾಡಿ ಪ್ರಯೋಜನವಿಲ್ಲ: ಇಮ್ರಾನ್ ಖಾನ್

Update: 2019-08-23 15:12 GMT

ಇಸ್ಲಾಮಾಬಾದ್, ಆ. 23: ಮಾತುಕತೆ ನಡೆಸಬೇಕೆನ್ನುವ ನನ್ನ ಕರೆಗೆ ಭಾರತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ ಹಾಗೂ ಪರಮಾಣು ಶಸ್ತ್ರ ಸಜ್ಜಿತ ನೆರೆಕರೆಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಬಹುದು ಎಂದು ಎಚ್ಚರಿಸಿದ್ದಾರೆ.

‘‘ಅವರೊಂದಿಗೆ ಮಾತನಾಡುವುದರಲ್ಲಿ ಏನೂ ಅರ್ಥವಿಲ್ಲ’’ ಎಂದು ಇಸ್ಲಾಮಾಬಾದ್‌ನಲ್ಲಿ ಇತ್ತೀಚೆಗೆ ‘ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.

‘‘ನಾನು ಹೇಳುವುದನ್ನೆಲ್ಲ ಹೇಳಿದ್ದೇನೆ. ಶಾಂತಿ ಮತ್ತು ಮಾತುಕತೆಗಾಗಿ ನಾನು ಮಾಡಿರುವ ಎಲ್ಲ ಪ್ರಯತ್ನಗಳನ್ನು ಈಗ ಹಿಂದಿರುಗಿ ನೋಡಿದಾಗ, ದುರದೃಷ್ಟವಶಾತ್ ಅವರು ಅವುಗಳನ್ನು ಓಲೈಕೆ ಎಂಬಂತೆ ಪರಿಗಣಿಸಿದ್ದಾರೆ ಎಂದು ಅನಿಸುತ್ತದೆ’’ ಎಂದು ಇಮ್ರಾನ್ ಹೇಳಿದರು.

‘‘ಇದಕ್ಕಿಂತ ಹೆಚ್ಚಿನದು ನಾವು ಮಾಡುವುದು ಏನೂ ಇಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News