ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ವಿತರಣೆ

Update: 2019-08-23 16:06 GMT

ಉಡುಪಿ, ಆ.23: ಉಡುಪಿ ಟೈಮ್ಸ್ ಕನ್ನಡ ವೆಬ್ ಸೈಟ್ ವತಿಯಿಂದ ನೆರೆ ಪೀಡಿತ ಸಂತ್ರಸ್ತರಿಗೆ ಸಂಗ್ರಹಿಸಲಾದ ಸುಮಾರು 2.80 ಲಕ್ಷ ರೂ. ವೌಲ್ಯದ ಪರಿಹಾರ ಸಾಮಾಗ್ರಿಗಳನ್ನು ಇತ್ತೀಚೆಗೆ ಅಂಕೋಲಕ್ಕೆ ಕಳುಹಿಸಿಕೊಡಲಾಯಿತು.

ಪರಿಹಾರ ಸಾಮಾಗ್ರಿ ಹಸ್ತಾಂತರ ಕಾರ್ಯಕ್ರಮಕ್ಕೆ ಉದ್ಯಮಿ ವಿಶ್ವನಾಥ ಶೆಣೈ ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಶಿರ್ವ ರೋಟರಿ ಕ್ಲಬ್ ನಿಕಟ ಪೂರ್ವ ಅಧ್ಯಕ್ಷ ದಯಾನಂದ, ಸದಸ್ಯ ಮಹಮ್ಮದ್ ಫಾರೂಕ್, ಬನ್ನಂಜೆ ನಾರಯಣಗುರು ಸಭಾಭವನ ಆಡಳಿತ ಮಂಡಳಿ ಅಧ್ಯಕ್ಷ ನರಸಿಂಹ ಸುವರ್ಣ, ಕಾರ್ಯದರ್ಶಿ ಕೃಷ್ಣ ಅಂಚನ್, ರಾಜೀವ ನಗರ ಫ್ರೆಂಡ್ಸ್ ಸದಸ್ಯ ನಿಖಿಲ್ ಉಪಸ್ಥಿತರಿದ್ದರು.

ಉಡುಪಿಯ ಹಲವಾರು ಸಂಘ ಸಂಸ್ಥೆಗಳು ನೀಡಿದ ದಿನ ಬಳಕೆ ವಸ್ತುಗಳನ್ನು ವಿಂಗಡಿಸಿ ಸುಮಾರು 300 ಕಿಟ್ಗಳನ್ನು ಅಂಕೋಲದ ನೆರೆ ಸಂತ್ರಸ್ತರಿಗೆ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News