ದರೋಡೆಗೆ ಸಂಚು ರೂಪಿಸಿದ ಪ್ರಕರಣ: ಸ್ಯಾಮ್ ಪೀಟರ್ ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ
Update: 2019-08-23 16:59 GMT
ಮಂಗಳೂರು, ಆ.23: ಕೇಂದ್ರ ತನಿಖಾ ಅಧಿಕಾರಿಗಳ ಸೋಗಿನಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಪ್ರಧಾನ ಆರೋಪಿ ಸ್ಯಾಮ್ ಪೀಟರ್ನನ್ನು ವಿಚಾರಣೆ ನಡೆಸಲು ಮತ್ತೆ ಒಂಬತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಸ್ತರಿಸಲಾಗಿದೆ.
ಈ ನಡುವೆ ಆರೋಪಿ ಸ್ಯಾಮ್ ಪೀಟರ್ನ ಹೆಚ್ಚಿನ ತನಿಖೆಗಾಗಿ ಸಿಬಿಐ (ಕೇಂದ್ರೀಯ ತನಿಖಾ ದಳ)ಹಾಗೂ ಇಂಟರ್ಪೋಲ್ ತನಿಖಾ ತಂಡಗಳು ಮಂಗಳೂರಿಗೆ ಆಗಮಿಸಿವೆ.
ನಗರದ ಪಂಪ್ವೆಲ್ ವಸತಿಗೃಹದಲ್ಲಿ ದರೋಡೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಸ್ಯಾಮ್ ಪೀಟರ್ ಹಾಗೂ ಆತನ ಏಳು ಸಹಚರರನ್ನು ಮಂಗಳೂರು ಪೂರ್ವ (ಕದ್ರಿ) ಪೊಲೀಸರು ಬಂಧಿಸಿದ್ದರು.
ಬಂಧಿತರಿಗೆ ಐದು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿತ್ತು. ಇದೀಗ ಪ್ರಮುಖ ಆರೋಪಿ ಸ್ಯಾಮ್ ಪೀಟರ್ಗೆ ಮತ್ತೆ ಒಂಬತ್ತು ದಿನಗಳ ಪೊಲೀಸ್ ಕಸ್ಟಡಿಯನ್ನು ಮಂಗಳೂರು ನ್ಯಾಯಾಲಯ ವಿಸ್ತರಿಸಿದೆ.