ಎನ್‌ಆರ್‌ಐ ಖಾತೆಯಿಂದ ಹಣ ವಂಚನೆ

Update: 2019-08-24 16:39 GMT

ಉಡುಪಿ, ಆ.24: ದುಬೈ ಉದ್ಯೋಗಿಯೊಬ್ಬರ ಕಾರ್ಪೊರೇಶನ್ ಬ್ಯಾಂಕ್ ಕುಂದಾಪುರ ಶಾಖೆಯಲ್ಲಿರುವ ಎನ್‌ಆರ್‌ಐ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದುಬೈಯಲ್ಲಿ ಉದ್ಯೋಗದಲ್ಲಿರುವ ಕುಂದಾಪುರ ಬಸ್ರೂರು ಮಾರ್ಗೋಳಿಯ ರಿಚರ್ಡ್ ವಿಲ್ಸನ್ ಎಂಬವರ ಮಗ ರೋಶನ್ ನಿಖಿಲ್ ಕಾರ್ಪೊರೇಶನ್ ಬ್ಯಾಂಕಿನ ಕುಂದಾಪುರ ಶಾಖೆಯಲ್ಲಿ ಎನ್‌ಆರ್‌ಐ ಖಾತೆಯನ್ನು ಹೊಂದಿದ್ದರು. ಇವರ ಎಟಿಎಂ ಕಾರ್ಡ್‌ನ್ನು ಇವರ ತಂದೆ ಬಳಸುತ್ತಿದ್ದರೆನ್ನಲಾಗಿದೆ.

ಕಿಡಿಗೇಡಿಗಳು ಆ.12ರಿಂದ 16ರ ಮಧ್ಯಾವಧಿಯಲ್ಲಿ ಇವರಿಗೆ ಅರಿವಿಲ್ಲದೆ ಇವರ ಮಗ ರೋಶನ್ ಖಾತೆಯಿಂದ 12 ಬಾರಿ ಒಟ್ಟು 1.25ಲಕ್ಷ ರೂ. ಹಣವನ್ನು ಡ್ರಾ ಮಾಡಿ ವಂಚಿಸಿರುವುದಾಗಿ ರಿಚರ್ಡ್ ವಿಲ್ಸನ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News