ಖಾತೆಯಿಂದ 5.50ಲಕ್ಷ ರೂ. ಡ್ರಾ ಮಾಡಿ ವಂಚನೆ

Update: 2019-08-24 16:41 GMT

ಉಡುಪಿ, ಆ.24: ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಲಕ್ಷಾಂತರ ರೂ. ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪೂರು ಗ್ರಾಮದ ತೆಂಕಬೆಟ್ಟು ಮದಗ ನಿವಾಸಿ ಹರೀಶ್ ಎಸ್.ಗುಡಿ ಗಾರ್(39) ಎಂಬವರು ಎಸ್‌ಬಿಐ ಸಂತೆಕಟ್ಟೆ ಶಾಖೆಯಲ್ಲಿ ಖಾತೆ ಹೊಂದಿದ್ದು ಕಿಡಿಗೇಡಿಗಳು ಅದರಲ್ಲಿ 4 ಎಫ್‌ಡಿ ಖಾತೆಗಳಿಗೆ ಆನ್‌ಲೈನ್ ಮೂಲಕ ಕನ್ನ ಹಾಕಿ ಅವರ ಅರಿವಿಗೆ ಬಾರದೆ 5,50,010ರೂ. ಡ್ರಾ ಮಾಡಿ ವಂಚಿಸಿರುವು ದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News