ಕೊಣಾಜೆ: ನೆರೆ ಪೀಡಿತ ಪ್ರದೇಶದ ಸಂತ್ರಸ್ತರಿಗೆ ಪರಿಹಾರ ವಿತರಣೆ

Update: 2019-08-24 16:59 GMT

ಕೊಣಾಜೆ: ಪಾವೂರು ಗ್ರಾಮ ಪಂ. ವ್ಯಾಪ್ತಿಯ ಉಳಿಯ, ದೋಟ, ಇನೋಳಿ ಪರಿಸರದ ನೆರೆ ಪೀಡಿತ ಸುಮಾರು 90 ಸಂತ್ರಸ್ತ ಕುಟುಂಬಸ್ಥರಿಗೆ  ಪಾವೂರು ಸಮುದಾಯ ಭವನದಲ್ಲಿ ತಲಾ ಹತ್ತು ಸಾವಿರ ರೂಪಾಯಿಯ ಚೆಕ್ ನ್ನು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಶನಿವಾರ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರೇಕಳ ಗ್ರಾಮ ಪಂ. ಅಧ್ಯಕ್ಷ ಫಿರೋಝ್ ಮಲಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು,ಪಾವೂರು ಪಂಚಾಯತ್ ಉಪಾಧ್ಯಕ್ಷೆ  ಲೀಲಾವತಿ,  ಸದಸ್ಯರಾದ ಹಸನ್ ಎಂ ಪಿ, ಚಕ್ಕರ್ ಮಹಮ್ಮದ್ ಇನೋಳಿ, ವಿವೇಕ್ ರೈ, ಚೆನ್ನಮ್ಮ, ಜಯಂತಿ, ರವಿಕಲಾ, ಸುನೀತಾ ಲೋಬೋ,ಹರೇಕಳ ಪಂಚಾಯತ್ ಸದಸ್ಯರಾದ ಮಹಾಬಲ ಹೆಗ್ಡೆ ದೆಬ್ಬೇಲಿ, ಬದ್ರುದ್ದೀನ್ ಹರೇಕಳ, ಯುವ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ರಿಯಾಝ್ ಅಹ್ಮದ್ ಪಾವೂರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಮಾರಿ ಸುಧಾರಾಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News