ಜೇಸಿಐ ಉಪ್ಪಿನಂಗಡಿ ನಿರ್ಮಿತ ತಂಗುದಾಣ ಲೋಕಾರ್ಪಣೆ

Update: 2019-08-24 17:12 GMT

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕವು 34ನೇ ನೆಕ್ಕಿಲಾಡಿಯ ಬೇರಿಕೆಯಲ್ಲಿ ನಿರ್ಮಿಸಿದ ನೂತನ ಪ್ರಯಾಣಿಕರ ತಂಗುದಾಣವನ್ನು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಶಿರೀಷ್ ದುಂಡು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಾರ್ವಜನಿಕರ ಅಗತ್ಯತೆಯನ್ನು ನೋಡಿ ಗ್ರಾಮೀಣ ಪ್ರದೇಶವಾದ ಇಲ್ಲಿ ಜೇಸಿಐ ಉಪ್ಪಿನಂಗಡಿ ಘಟಕವು ಸಾರ್ವಜನಿಕ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿಯೆನಿಸಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭ ಜೇಸೀಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಮುರಳೀ ಶ್ಯಾಂ, ವಲಯ 15ರ ಅಧ್ಯಕ್ಷ ಅಶೋಕ್ ಚೂಂತಾರು, ವಲಯ ಉಪಾಧ್ಯಕ್ಷ ದಾಮೋದರ ಪಾಟಾಳಿ,  ಜಬ್ಬಾರ್ ಸಾಹೇಬ್, ಜಯೇಶ್ ಬರೆಟ್ಟೋ, ಆಡಳಿತ ವಿಭಾಗದ ನಿರ್ದೇಶಕ ಪ್ರಶಾಂತ್ ಕುಮಾರ್ ರೈ, ವಲಯಾಧಿಕಾರಿಗಳಾದ ಶಿವಕುಮಾರ್ ಬಾರಿತ್ತಾಯ, ಪುರುಷೋತ್ತಮ ಶೆಟ್ಟಿ, ಮನಮೋಹನ್, ಪೂರ್ವ ವಲಯಾಧಿಕಾರಿಗಳಾದ ವಸಂತ ಜಾಲಾಡಿ, ರಕ್ಷಿತ್, ಉಪ್ಪಿನಂಗಡಿ ಪೂರ್ವಾಧ್ಯಕ್ಷರಾದ ಡಾ. ಗೋವಿಂದ ಪ್ರಸಾದ್ ಕಜೆ, ಡಾ. ರಾಜಾರಾಮ್ ಕೆ.ಬಿ., ಆನಂದ ರಾಮಕುಂಜ, ಕೇಶವ ರಂಗಾಜೆ, ಉಮೇಶ್ ಆಚಾರ್ಯ, ಹರೀಶ್ ನಾಯಕ್ ನಟ್ಟಿಬೈಲು, 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯ ಮೈಕಲ್ ವೇಗಸ್, ತಾ.ಪಂ. ಸದಸ್ಯ ಲಕ್ಷ್ಮಣ್ ಗೌಡ ಕೋಡಿಂಬಾಡಿ, ಪಂಚಾಯತ್ ಸದಸ್ಯರಾದ ಜಗನ್ನಾಥ ನಡುಮನೆ, ಮುರಳೀಧರ ರೈ ಮಠಂತಬೆಟ್ಟು, ಜಯಪ್ರಕಾಶ್ ಬದಿನಾರು, ದಿವಾಕರ ಶೆಟ್ಟಿ ಕಾರ್ನೋಜಿ, ವಿಕ್ರಂ ಶೆಟ್ಟಿ ಕೋಡಿಂಬಾಡಿ, ಆನಂದ್ ಶೆಟ್ಟಿಗಾರ್ ಅಲಂಗೋಡಿ, ಕಾರ್ಯಕ್ರಮ ನಿರ್ದೇಶಕ ಪದ್ಮಪ್ಪ ಪೂಜಾರಿ ಪರನೀರು, ಪ್ರಹ್ಲಾದ್ ಬಿ., ಗಣೇಶ ಪಾಲೆತ್ತಡಿ, ಶೇಖರ ಪೂಜಾರಿ ಜೇಡರಪಾಲು, ಅಶೋಕ್, ಜೇಸಿ ಸದಸ್ಯರಾದ ಅವನೀಶ್, ಜಗದೀಶ್ ಕಜೆ, ಜಯಪ್ರಕಾಶ್ ದೇವಸ್ಯ, ರಾಘವೇಂದ್ರ ನಾಯಕ್, ಶಶಿಧರ ನೆಕ್ಕಿಲಾಡಿ, ಸಿರಿಲ್ ವೇಗಸ್, ಗೋಪಾಲ ಪೂಜಾರಿ ಬೇರಿಕೆ, ಆದರ್ಶ ಕಜೆಕ್ಕಾರು, ಸಂಕಪ್ಪ ಶೆಟ್ಟಿ, ತಷ್ವೀತ್ ಮತ್ತಿತರರು ಉಪಸ್ಥಿತರಿದ್ದರು.

ಜೇಸಿಐ ಉಪ್ಪಿನಂಗಡಿ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು ಸ್ವಾಗತಿಸಿದರು. ಕಾರ್ಯದರ್ಶಿ ಸಂದೇಶ್ ನಟ್ಟಿಬೈಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News