ಅಥ್ಲೆಟಿಕ್ನಲ್ಲಿ ರಾಶಿಗೆ ಚಿನ್ನದ ಪದಕ : ರಾಷ್ಟ್ರಮಟ್ಟಕ್ಕೆ ಆಯ್ಕೆ
Update: 2019-08-26 10:54 GMT
ಮಡಿಕೇರಿ, ಆ. 26 : ಉಡುಪಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಬೆಂಗಳೂರಿನ ಶ್ರೀಗಂಧ ಕಾಲೇಜಿನ ವಿದ್ಯಾರ್ಥಿನಿ ಸಿ.ಎಂ. ರಾಶಿ 1500 ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಬೆಂಗಳೂರಿನ ಸಾಯಿ ಕ್ರೀಡಾ ವಸತಿ ಗೃಹದಲ್ಲಿ ಅಭ್ಯಾಸ ಮಾಡುತ್ತಿದ್ದು, ಇವರಿಗೆ ದೈಹಿಕ ಶಿಕ್ಷಕರಾದ ಸತೀಶ್ ಹಾಗೂ ಸಿದ್ದು ತರಬೇತಿ ನೀಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನ ಹಲವು ಓಟದ ಸ್ಪರ್ದೆಯಲ್ಲಿ ಭಾಗವಹಿಸಿರುವ ರಾಶಿ ಸೋಮವಾರ ಪೇಟೆ ಸಮೀಪದ ಕೂತಿ ಗ್ರಾಮದ ಮಂಜುನಾಥ್ ಮತ್ತು ಪರಿಮಳ ದಂಪತಿಯ ಪುತ್ರಿ.