ಮಂಗಳೂರು: ಮಾಜಿ ಫುಟ್ಬಾಲ್ ಆಟಗಾರರ ಸ್ನೇಹಕೂಟ

Update: 2019-08-26 18:12 GMT
ಮಂಗಳೂರಿನ ಓಷಿಯನ್ ಪರ್ಲ್ ನಲ್ಲಿ ರವಿವಾರ ನಡೆದ ಮಾಜಿ ಫುಟ್ಬಾಲ್ ಆಟಗಾರರ ಸ್ನೇಹಕೂಟದಲ್ಲಿ ಹಿರಿಯ ಆಟಗಾರರನ್ನು ಸನ್ಮಾನಿಸಲಾಯಿತು.

ಮಂಗಳೂರು: ಮಾಜಿ ಫುಟ್ಬಾಲ್ ಆಟಗಾರರ ವತಿಯಿಂದ ಮಂಗಳೂರಿನ ಮಾಜಿ ಖ್ಯಾತ ಫುಟ್ಬಾಲ್ ಆಟಗಾರರ ಸ್ನೇಹಕೂಟ ಕಾರ್ಯಕ್ರಮವು ನಗರದ ಓಷಿಯನ್ ಪರ್ಲ್ ಸಭಾಂಗಣದಲ್ಲಿ  ನಡೆಯಿತು.

ಕಾರ್ಯಕ್ರಮದಲ್ಲಿ ಗಣ್ಯ 48 ಅತ್ಯುತ್ತಮ ಆಟಗಾರರನ್ನು ಸ್ಮರಿಸಿ, ಗೌರವಿಸಲಾಯಿತು ಹಾಗು ಖ್ಯಾತ ಹಿರಿಯ ಮಾಜಿ  ಫುಟ್ಬಾಲ್ ಆಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಲವರು ವರ್ಷಗಳ ಹಿಂದೆ ಬ್ರಿಟಿಷರಿಂದ ಕಲಿತಂತಹ ಈ ಆಟದಿಂದ ಮಂಗಳೂರಿಗೆ ಅನೇಕ ಕೀರ್ತಿಯನ್ನು ನೀಡಿದೆ. ವಿಶೇಷವಾಗಿ ಸಂತೋಷ್ ಟ್ರೋಫಿ, ಇಂಡಿಯನ್ ಏರ್ ಫೋರ್ಸ್, ಮಹಾರಾಷ್ಟ್ರ ಯೂನಿಯನ್ ಬ್ಯಾಂಕ್, ಕೇರಳ ಸ್ಟೇಟ್ ನಲ್ಲಿ ಪ್ರತಿನಿಧಿಸಿದ ಅತ್ಯುತ್ತಮ ಆಟಗಾರರನ್ನು ಜಿಲ್ಲೆಗೆ ನೀಡಿದೆ ಎಂದು ಸ್ಪೋರ್ಟಿಂಗ್  ತಂಡದ ಅತ್ಯುತ್ತಮ ಆಟಗಾರ, ಕೇರಳ ಸ್ಟೇಟ್ ಫುಟ್ಬಾಲ್ ತಂಡದ ತರಬೇತುದಾರ ಪಿ.ಸಿ.ಆಸಿಫ್ ಹೇಳಿದರು. ಇಹ್ತಿಶಾಮ್ ಪಿ.ಸಿ. ಅನುವಾದಿಸಿದರು. ಮಾಜಿ ಫುಟ್ಬಾಲ್ ಆಟಗಾರ ಅಬ್ದುಲ್ಲಾ ವಂದಿಸಿದರು.

ಕಾರ್ಯಕ್ರಮದ ಸಂಘಟಕರಾದ  ಅಬ್ದುಲ್ಲಾ ಬಿ, ಭಾಸ್ಕರ್ ಬೆಂಗ್ರೆ, ನಿಯಾಝ್ ಎ.ಕೆ., ಪಿ.ಸಿ. ಆಸಿಫ್, ಅಬ್ದುಲ್ ಮಜೀದ್, ಕಾಸಿಂ ಕಂದಕ್, ಸಲಾಂ ಕಂದಕ್, ಮುಸ್ತಫ ಬೋಲಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News