ಗುರುಪುರ ಕೈಕಂಬದಲ್ಲಿ ಸಾಮೂಹಿಕ ವಿವಾಹ

Update: 2019-08-28 17:13 GMT

ಮಂಗಳೂರು, ಆ.28: ಗುರುಪುರ ಕೈಕಂಬ ಫ್ರೆಂಡ್ಸ್ ಸರ್ಕಲ್ ವತಿಯಿಂದ ಎರಡು ಜೋಡಿಗಳ ಸಾಮೂಹಿಕ ವಿವಾಹವು ಇತ್ತೀಚೆಗೆ ಕೈಕಂಬ ಮೇಗ ಫ್ಲಾಜ ಸಭಾಂಗಣದಲ್ಲಿ ಜರಗಿತು.

ಬಿ.ಕೆ.ಅಬ್ದುಲ್ ಖಾದರ್ ಮುಸ್ಲಿಯಾರ್ ನಿಖಾಹ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಫೆಂಡ್ಸ್ ಸರ್ಕಲ್‌ನ ಅಧ್ಯಕ್ಷ ಇಮ್ತಿಯಾಝ್ ಗುರುಪುರ ವಹಿಸಿದ್ದರು. ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತಾನಪುರಂ ಪ್ರವಚನ ನೀಡಿದರು.

ಕೈಕಂಬ ಮರ್ಕಝ್ ದವ್ವತ್ತಿಲ್ ಇಸ್ಲಾಮಿ ಅಧ್ಯಕ್ಷ ಬದ್ರುದ್ದೀನ್ ಅಝ್‌ಹರಿ ಕೈಕಂಬ ಸ್ವಾಗತಿಸಿದರು. ಗುರುಪುರ ದಾರುಸ್ಸಲಾಂ ಜುಮಾ ಮಸೀದಿಯ ಖತೀಬ್ ಜಮಾಲ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಮೇಗ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ವೀರ್ ಗುರುಪು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News