ಗಂಗೊಳ್ಳಿ ಬಳಿ ಸರಣಿ ಅಪಘಾತ: ಬೈಕ್ ಸವಾರ ಮೃತ್ಯು, ಮೂವರಿಗೆ ಗಾಯ

Update: 2019-08-31 17:00 GMT

ಗಂಗೊಳ್ಳಿ, ಆ.31: ಕಾರೊಂದು ಎರಡು ಬೈಕಿಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಮೃತಪಟ್ಟು ಮೂವರು ತೀವ್ರವಾಗಿ ಗಾಯ ಗೊಂಡ ಘಟನೆ ನಾಯಕವಾಡಿಯ ರಾಮ ಮಂದಿರದ ಎದುರು ಇಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ಬೈಕ್ ಸವಾರ ಗುಜ್ಜಾಡಿ ನಿವಾಸಿ ಮುಝಮ್ಮಿಲ್ ಎಂಬವರ ಮಗ ಮೊಹಮ್ಮದ್ ತಾರೀಕ್(23) ಎಂದು ಗುರುತಿಸಲಾಗಿದೆ. ತ್ರಾಸಿ ಕಡೆ ಯಿಂದ ಗಂಗೊಳ್ಳಿ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಆ್ಯಕ್ಟಿವಾ ಹೊಂಡಗೆ ಗಂಗೊಳ್ಳಿ ಕಡೆಯಿಂದ ತ್ರಾಸಿ ಕಡೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ತಾರೀಕ್ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಆ್ಯಕ್ಟಿವಾದಲ್ಲಿದ್ದ ನಾಯಕವಾಡಿಯ ರವಿ ಹಾಗೂ ನರಸಿಂಹ ತೀವ್ರ ಮತ್ತು ಕಾರು ಚಾಲಕ ಮೌಲಾನಾ ಅಜ್ಗರ್ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News