ಬಾವಿಗೆ ಬಿದ್ದು ಮೃತ್ಯು

Update: 2019-08-31 17:02 GMT

ಕೋಟ, ಆ.31: ಆವರಣವಿಲ್ಲದ ಬಾವಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ಹೊಂಬಾಡಿ ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಆ.30ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಹುಣ್ಸೆಮಕ್ಕಿಯ ನಿವಾಸಿ ಕೊರಗಯ್ಯ ಶೆಟ್ಟಿ (60) ಎಂದು ಗುರು ತಿಸಲಾಗಿದೆ.

ಇವರು ಮನೆ ಸಮೀಪದ ಸಿದ್ದು ಪೂಜಾರ್ತಿ ಎಂಬವರ ಜಾಗ ದಲ್ಲಿರುವ ಆವರಣವಿಲ್ಲದ ಬಾವಿಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿ ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News