ಕೋಮು ಪ್ರಚೋದಿತ ಸಂದೇಶ ರವಾನೆ: ಆರೋಪಿ ಸೆರೆ
Update: 2019-08-31 17:38 GMT
ಉಪ್ಪಿನಂಗಡಿ : ಸಮುದಾಯವೊಂದರ ಹೆಣ್ಣು ಮಕ್ಕಳನ್ನು ಅವಮಾನಿಸುವಂತಹ ಸಂದೇಶವನ್ನು ಫೇಸ್ ಬುಕ್ ಪೋಸ್ಟ್ ಹಂಚಿದ ಆರೋಪದಲ್ಲಿ ಉಪ್ಪಿನಂಗಡಿಯ ವ್ಯಾಪಾರಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಮು ಪ್ರಚೋದಿತ ಸಂದೇಶವನ್ನು ಸಾರ್ವಜನಿಕರಿಗೆ ಹರಡಿದ ಆರೋಪದನ್ವಯ ಉಪ್ಪಿನಂಗಡಿಯಲ್ಲಿ ಹಾಲಿನ ಬೂತ್ ಇರಿಸಿ ವ್ಯಾಪಾರ ನಡೆಸುತ್ತಿದ್ದ ಪ್ರವೀಣ್ ಗೌಡ ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.