ಕಾಸರಗೋಡು : ಬೈಕ್ - ಕಾರು ನಡುವೆ ಢಿಕ್ಕಿ; ಬ್ಯಾಂಕ್ ಮ್ಯಾನೇಜರ್ ಮೃತ್ಯು

Update: 2019-09-02 08:49 GMT

ಕಾಸರಗೋಡು :  ಬೈಕ್ ಮತ್ತು ಕಾರು ನಡುವೆ ಉಂಟಾದ ಅಪಘಾತದಲ್ಲಿ ಬ್ಯಾಂಕ್  ಮ್ಯಾನೇಜರ್ ಮೃತಪಟ್ಟ ಘಟನೆ   ಚೆರ್ವತ್ತೂರು ಪಿಲಿಕ್ಕೋಡ್ ನಲ್ಲಿ  ಸೋಮವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಕಾಸರಗೋಡು ನಗರ ಹೊರವಲಯದ ಕೂಡ್ಲುವಿನ   ಕೆ. ಗಿರೀಶ್ ಕುಮಾರ್ (46) ಎಂದು ಗುರುತಿಸಲಾಗಿದೆ . 
ಅವರು ಸ್ಟೇಟ್ ಬ್ಯಾಂಕ್ ಆಫ್  ಇಂಡಿಯಾದ ಕಣ್ಣೂರು ಶಾಖೆಯ ಮುಖ್ಯ ಪ್ರಬಂಧಕರಾಗಿದ್ದರು.

ಬೆಳಗ್ಗೆ ಬುಲೆಟ್ ಬೈಕ್ ನಲ್ಲಿ ತೆರಳುತ್ತಿದ್ದಾಗಅಪಘಾತ ನಡೆದಿದೆ.  ರಸ್ತೆಯಲ್ಲಿನ ಹೊಂಡಗಳನ್ನು ತಪ್ಪಿಸುವ ಭರದಲ್ಲಿ ಅಪಘಾತ  ನಡೆದಿದ್ದು, ಅಪಘಾತಕ್ಕೆ ಕಾರಣ ವಾದ ಕಾರು ನಿಲ್ಲಿಸದೆ ಪರಾರಿಯಾಗಿದೆ.  

ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News