ಕಳ್ಳನೆಂದು ಶಂಕಿಸಿ ಬಸ್ ಚಾಲಕನನ್ನು ಥಳಿಸಿ ಹತ್ಯೆಗೈದ ಗುಂಪು!

Update: 2019-09-03 12:07 GMT

ಪಾಲ್ಘರ್:  ಕಳ್ಳನೆಂದು ತಪ್ಪಾಗಿ ತಿಳಿದು ಜನರ ಗುಂಪೊಂದು 32 ವರ್ಷದ ಬಸ್ ಚಾಲಕನಿಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಗಂಭೀರವಾಗಿ ಥಳಿಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಪೊಲೀಸರು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ತ ರಂಜಿತ್ ಪಾಂಡೆ ಬೊಯ್ಸರ್ ಪ್ರದೇಶದಲ್ಲಿ ಬಸ್ಸಿನ ಪಕ್ಕ ಆಗಸ್ಟ್ 21ರಂದು ನಿಂತಿದ್ದ ವೇಳೆ ಆತ ವಾಹನದ ಬ್ಯಾಟರಿ ಕದ್ದು ಟಯರುಗಳ ಗಾಳಿ ತೆಗೆಯುವವನೆಂದು ತಪ್ಪಾಗಿ ತಿಳಿದ ಜನರು ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದರು.

ಆತನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ನಂತರ ನೆರೆಯ ಗುಜರಾತ್ ರಾಜ್ಯದ ವಲ್ಸಾಡ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಸಾವನ್ನಪ್ಪಿದ್ದಾನೆ. ಇಲ್ಲಿಯ ತನಕ ಪೊಲೀಸರು ಈ ಘಟನೆ ಸಂಬಂಧ ಯಾರನ್ನೂ ಬಂಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News