ಯುವಕ ನಾಪತ್ತೆ
Update: 2019-09-03 22:28 IST
ಕುಂದಾಪುರ, ಸೆ.3: ಅಂಪಾರು ಗ್ರಾಮದ ನೆಲ್ಲಿಕಟ್ಟೆ ಜನತಾ ಕಾಲೋನಿಯ ಸತೀಶ ಪೂಜಾರಿ (38) ಎಂಬವರು ಸೆ.2ರಂದು ಬೆಳಗ್ಗೆ ಮನೆಯಿಂದ ಹೊರಟು ಬಳ್ಕೂರು ಗ್ರಾಮದ ಬಿ.ಎಚ್.ಜಂಕ್ಷನ್ನಲ್ಲಿರುವ ಗೂಡಂಗಡಿಗೆ ಬೀಗ ಹಾಕಿ ಕುಂದಾಪುರಕ್ಕೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.