ಮಳೆಹಾನಿ: ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ
Update: 2019-09-07 16:42 GMT
ಬ್ರಹ್ಮಾವರ, ಸೆ.7: ಕಳ್ತೂರು ಗ್ರಾಪಂ ವ್ಯಾಪ್ತಿಯ ಕೆಂಜೂರು ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ಯಲ್ಲಿ ಪರಿಹಾರದ ಚೆಕ್ಕನ್ನು ಇಂದು ವಿತರಿಸಲಾಯಿತು.
ಸಂತ್ರಸ್ತರಾದ ಕೆಂಜೂರು ನಿವಾಸಿಗಳಾದ ಕಮಲ ಕುಲಾಲ, ನರಸಿಂಹ ಕುಲಾಲ್, ಅಮ್ಮಣ್ಣಿ ಕುಲಾಲ ಅವರಿಗೆ ತಲಾ 95,100ರೂ. ಪ್ರಥಮ ಹಂತದ ಪರಿಹಾರ ಮೊತ್ತವನ್ನು ಉಡುಪಿ ಶಾಕ ಕೆ.ರಘುಪತಿ ಭಟ್ ವಿತರಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೋರಯ್ಯ, ಜಿಪಂ ಸದಸ್ಯ ಅಶೋಕ್ ಮೈರ್ಮಾಡಿ, ತಾಪಂ ಸದಸ್ಯ ಡಾ.ಸುನೀತಾ ಶೆಟ್ಟಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಳ್ಳಿ ಮೊದಲಾದವರು ಹಾಜರಿದ್ದರು.