ಸೆ. 7: ಸಾಗರ್ ಆಡಿಟೋರಿಯಮ್ ನಲ್ಲಿ ಶರಪುಲ್ ಉಲಮಾ ಸಂಸ್ಮ ರಣೆ

Update: 2019-09-07 17:28 GMT

ಮಂಗಳೂರು: ಇತ್ತೀಚೆಗೆ ನಿಧನರಾದ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅವರ ಸಂಸ್ಮರಣಾ ಸಮಾರಂಭವು ಪಾಣೆಮಂಗಳೂರು ಸಾಗರ ಅಡಿಟೋರಿಯಮ್ ನಲ್ಲಿ ಸೆ. 7 ರಂದು ಬೆಳಗ್ಗೆ 10ಕ್ಕೆ ಫಝಲ್ ಕೋಯಮ್ಮ ತಂಙಲ್ ಮದನಿ ಅವರ ದುಆ ದೊಂದಿಗೆ ಮಾಣಿ ಉಸ್ತಾದ್ ಉದ್ಘಾಟಿಸಿ, ಬೇಕಲ್ ಉಸ್ತಾದ್ ಸಂಸ್ಮರಣಾ ಬಾಷಣ ಮಾಡಲಿದ್ದಾರೆ.

ಕೋ ಆರ್ಡಿನೇಷನ್ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಕೋ ಆರ್ಡಿನೇಷನ್ ಕೋಶಾಧಿಕಾರಿ ಸಯ್ಯಿದ್ ಇಸ್ಮಾಯಿಲ್ ತಂಙಲ್ ಉಜಿರೆ, ಕೋ ಆರ್ಡಿನೇಷನ್ ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಎಸ್ ವೈ ಎಸ್ ರಾಜ್ಯಾಧ್ಯಕ್ಷ  ಜಿ ಎಂ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಡಾ. ಝೈನಿ ಕಾಮಿಲ್, ಕೆ ಕೆ ಎಂ  ಕಾಮಿಲ್, ಹನೀಫ್ ಮಿಸ್ಬಾಹಿ, ಅಬ್ಡುಲ್ ಖಾದರ್ ಸಖಾಫಿ,ಕೆಸಿಎಫ್ ನಾಯಕರಾದ ರಹೀಮ್ ಸಅದಿ ಕತರ್, ಪಿ ಪಿ ನಝೀರ್, ರಝಾಕ್ ಹಾಜಿ, ಸಾದಿಕ್ ಮಲೆಬೆಟ್ಟು, ಅಬ್ಡುಲ್ ಹಮೀದ್ ಬಜ್ಪೆ ಭಾಗವಹಿಸುವರು ಎಂದು ಕೋ ಆರ್ಡಿನೇಷನ್ ಕಾರ್ಯದರ್ಶಿ ಅಶ್ರಪ್ ಕಿನಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News