ಎಜಿಸಿ ರಿಯಾದ್ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
Update: 2019-09-07 17:37 GMT
ರಿಯಾದ್: ಎಜಿಸಿ ರಿಯಾದ್ ಇದರ ಮಹಾಸಭೆಯು ಇಲ್ಲಿನ ಪಿಸಿ ಶರೀಫ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಶರೀಫ್ ಸಿಪಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಿರಾಅತ್ ಪಠಿಸಿದರು.
2018-19ನೇ ಸಾಲಿನ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಖಲಂದರ್ ಗುತ್ತು ವಾಚಿಸಿದರು. ನಂತರ ಹಳೆಯ ಕಮಿಟಿಯನ್ನು ಬರ್ಖಾಸ್ತುಗೊಳಿಸಿ ಹೊಸ ಕಮಿಟಿ ರಚಿಸಲಾಯಿತು.
ಅಧ್ಯಕ್ಷರಾಗಿ ಸಲಾಂ ಗೋಳಿಪಡ್ಪು, ಉಪಾಧ್ಯಕ್ಷರಾಗಿ ಎಂಎಸ್ ರಫೀಕ್, ಗೌರವ ಅಧ್ಯಕ್ಷರಾಗಿ ಶರೀಫ್ ಸಿಪಿಸಿ, ಕಾರ್ಯದರ್ಶಿಯಾಗಿ ಖಲಂದರ್ ಗುತ್ತು, ಜೊತೆ ಕಾರ್ಯದರ್ಶಿಯಾಗಿ ಹಕೀಮ್ ಅಳಕೆ, ಖಜಾಂಚಿಯಾಗಿ ಪಿಸಿ ಶರೀಫ್ ಹಾಗೂ 5 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.