ಕೊರಂಟಿಕಟ್ಟೆ ಅಲ್ನೂರ್ ಮದ್ರಸಕ್ಕೆ ಕೊಡುಗೆ
Update: 2019-09-08 20:50 IST
ಉಡುಪಿ, ಸೆ.8: ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಉಡುಪಿ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕಾಪು ಚಂದ್ರನಗರ ಕೊರಂಟಿಕಟ್ಟೆ ಅಲ್ ನೂರ್ ಮದ್ರಸಕ್ಕೆ ಟೇಬಲ್ ಹಾಗೂ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ವಿ.ಜಿ.ಶೆಟ್ಟಿ, ಲಯನ್ಸ್ ಕ್ಲಬ್ನ ಮುಹಮ್ಮದ್ ಹನೀಫ್ ಪುತ್ತಿಗೆ, ಸಲೀಂ, ಹಂಝತ್ ಹೆಜಮಾಡಿ, ಮುಹಮ್ಮದ್ ಮೌಲಾ, ಕುದಿ ವಸಂತ ಶೆಟ್ಟಿ, ಮದ್ರಸ ಉಪಾಧ್ಯಕ್ಷ ಮುಸ್ತಾಕ್ ಅಹ್ಮದ್, ಅಬ್ದುಲ್ ರಝಾಕ್, ಆಲಿಯಬ್ಬ, ಝಿಯಾನ್ ಮೊದಲಾದ ವರು ಉಪಸ್ಥಿತರಿದ್ದರು.