ಬ್ರಹ್ಮಾವರ: ಮನೆಗೆ ನುಗ್ಗಿ ನಗ ನಗದು ಕಳವು

Update: 2019-09-10 16:14 GMT

ಬ್ರಹ್ಮಾವರ, ಸೆ.10: ಯಡ್ತಾಡಿ ಗ್ರಾಮದ ಬನಶಂಕರಿ ಎಂಬಲ್ಲಿ ಸೆ.9ರಂದು ರಾತ್ರಿ ವೇಳೆ ಮನೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ರಾಜೇಶ ಎ.ಎಚ್. ಎಂಬವರ ಮೂಲ ಮನೆಯ ಎದುರಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮಲಗುವ ಕೋಣೆಯಲ್ಲಿನ ಕಪಾಟಿನಲ್ಲಿದ್ದ ಒಟ್ಟು 65,000ರೂ. ಮೌಲ್ಯದ ಚಿನ್ನದ ಸರ, ಎರಡು ಚಿನ್ನದ ಬಳೆ, ಎರಡು ಚಿನ್ನದ ಉಂಗುರ ಮತ್ತು 700ರೂ. ನಗದು ಕಳವು ಮಾಡಿರುವ ಬಗ್ಗೆ ದೂರಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News