ಉಪನ್ಯಾಸಕ ರಾಮ್ ಪ್ರಕಾಶ್ ನೂಜಿಗೆ ಡಾಕ್ಟರೇಟ್ ಪದವಿ
Update: 2019-09-10 16:47 GMT
ಪುತ್ತೂರು: ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜ್ನ ಉಪನ್ಯಾಸಕರಾದ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ನಿವಾಸಿ ರಾಮ್ ಪ್ರಕಾಶ್ ನೂಜಿ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಬೆಂಗಳೂರಿನ ರಾಮಯ್ಯ ಇನ್ಸಿಟ್ಯೂಟ್ ಆಫ್ ಮೆನೇಜ್ಮೆಂಟ್ ಸ್ಟಡೀಸ್ ಇದರ ಪ್ರಾಧ್ಯಾಪಕ ಡಾ. ವೈ. ರಾಜಾರಾಮ್ ಅವರ ಮಾರ್ಗದರ್ಶನದಲ್ಲಿ ರಾಮ್ ಪ್ರಕಾಶ್ ಅವರು `ಇಂಪ್ಯಾಕ್ಟ್ ಆಪ್ ಕಾರ್ಪೊರೇಟ್ ಸೋಸಿಯಲ್ ರೆಸ್ಪಾನ್ಸಿಬಿಲಿಟಿ ಇನಿಶಿಯೇಟಿವ್ಸ್ ಆಪ್ ಸೆಲೆಕ್ಟೆಡ್ ಕಂಪೆನೀಸ್ ಇನ್ ಕರ್ನಾಟಕ ಆನ್ ಪೀಪಲ್, ಪ್ಲಾಂಟ್ ಆಂಡ್ ಪ್ರಾಫಿಟ್' ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದು, ಈ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.
ಪ್ರಸ್ತುತ ಮೈಸೂರು ನಿವಾಸಿಯಾಗಿರುವ ರಾಮ್ ಪ್ರಕಾಶ್ ಅವರು ಪೋಳ್ಯ ನೂಜಿ ಡಾ. ರಾಧಾಕೃಷ್ಣ ಭಟ್ ಮತ್ತು ವಾಣಿ ಆರ್ ಭಟ್ ದಂಪತಿಯ ಪುತ್ರ.