ಕವಿವೃಕ್ಷ ಬಳಗ ಉದ್ಘಾಟನೆ: ಪುಸ್ತಕ ಬಿಡುಗಡೆ, ಕವಿಗೋಷ್ಠಿ

Update: 2019-09-11 16:03 GMT

ಉಡುಪಿ, ಸೆ.11: ಉಡುಪಿ ಜಿಲ್ಲಾ ಕವಿ ವೃಕ್ಷ ಬಳಗ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ, ಪದಗ್ರಹಣ, ಉಪನ್ಯಾಸ ಕಾರ್ಯಾಗಾರ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು ಕಲ್ಸಂಕ ಶ್ರೀಕೃಷ್ಣ ಪ್ರಜ್ಞಾ ಪ್ರತಿಷ್ಠಾನ ಸಭಾಭವನದಲ್ಲಿ ರವಿವಾರ ಜರಗಿತು.

ಕವಿವೃಕ್ಷ ಬಳಗವನ್ನು ಹಿರಿಯ ಸಾಹಿತಿ ಹಾಗೂ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಉದ್ಘಾಟಿಸಿ ದರು. ಲೇಖಕಿ ಶೋಭಾ ಹರಿಪ್ರಸಾದ್ ಕುಕ್ಕಿಕಟ್ಟೆ ಬರೆದ ’ಚಿಣ್ಣರ ಕನಸಿನ ಬಣ್ಣದ ಲೋಕ’ ಕವನ ಸಂಕಲನವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.

ಉಪನ್ಯಾಸ ಕಾರ್ಯಗಾರವನ್ನು ಮೂಡಬಿದ್ರೆ ಪಾಲಿಟೆಕ್ನಿಕ್‌ನ ಉಪನ್ಯಾಸಕ ವಿಶ್ವನಾಥ್ ಕೆ. ನಡೆಸಿಕೊಟ್ಟರು. ಕವಿಗೋಷ್ಠಿಯಲ್ಲಿ ಶೇಖರ ಬಿ.ದೇವಾಡಿಗ, ಸಂತೋಷ ಮುದ್ರಾಡಿ, ಜಗದೀಶ ರಾಮ್ ಶೆಟ್ಟಿಗಾರ್, ಮಂಜುನಾಥ ಮರ ವಂತೆ, ಶ್ಯಾಮಪ್ರಸಾದ್ ಭಟ್, ಪುಂಡಲೀಕ ನಾಯಕ್, ಮಂಜುನಾಥ ದೇವಾಡಿಗ, ಪುಷ್ಪಆರ್.ಮೇಸ್ತ, ಜಗದೀಶ ದೇವಾಡಿಗ, ದಿನೇಶ್ ಎನ್., ಗಣೇಶ್ ಪ್ರಸಾದ್ ಪಾಂಡೇಲು, ಶೋಭಾ ಹರಿಪ್ರಸಾದ್, ಚೇತನ್ ವಿನಾಯಕ, ರಾಮ ಮೂರ್ತಿ, ಉಮೇಶ ಆಚಾರ್ಯ ತಮ್ಮ ಸ್ವರಚಿತ ಕವನಗಳು ಮತ್ತು ಗಝಲ್ಗಳನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಶ್ಯಾಂಪ್ರಸಾದ್ ಭಟ್, ಲೇಖಕಿ ಶೋಭಾ ಹರಿಪ್ರಸಾದ್ ಕುಕ್ಕಿಕಟ್ಟೆ, ವಿಘ್ನೇಶ್ವರ ಉಡುಪ, ಗಣರಾಜ್ ಭಟ್, ಭಾಸ್ಕರ ಶೆಟ್ಟಿ, ರವೀಂದ್ರ ಎಚ್., ಲೇಖಕಿ ಪುಷ್ಪಮೇಸ್ತ ಶಿರೂರು ಉಪಸ್ಥಿತರಿದ್ದರು. ಕವಿ ಶೇಖರ ಬಿ. ದೇವಾಡಿಗ ಸ್ವಾಗತಿಸಿದರು. ರಾಮಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಚೇತನ್ ವಿನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News