ಮಟ್ಕಾ: ಮೂವರ ಬಂಧನ

Update: 2019-09-11 16:23 GMT

ಉಡುಪಿ, ಸೆ.11: ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸೆ.11ರಂದು ಮಧ್ಯಾಹ್ನ ವೇಳೆ ಮಟ್ಕಾ ಜುಗಾರಿ ನಡೆಸುತ್ತಿದ್ದ ಬಡಗುಬೆಟ್ಟು ಗ್ರಾಮದ ಬೈಲೂರಿನ ಧರ್ಮೇಂದ್ರ(52) ಎಂಬಾತನನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ.

ಗಂಗೊಳ್ಳಿ: ಮಟ್ಕಾ ಜುಗಾರಿಗೆ ಸಂಬಂಧಿಸಿ ಸೆ.10ರಂದು ಗಂಗೊಳ್ಳಿ ನೀರು ಟ್ಯಾಂಕ್ ಬಳಿ ಮೆಲ್ಗಂಗೊಳ್ಳಿ ಸುಗ್ಗಿಬೈಲು ನಿವಾಸಿ ದಾಮೋದರ ಶೇರುಗಾರ (51) ಮತ್ತು ಸೆ.11ರಂದು ಅಪರಾಹ್ನ ವೇಳೆ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯಲ್ಲಿ ಗಂಗೊಳ್ಳಿ ಎಸ್.ವಿ.ಕಾಲೇಜು ಸಮೀಪದ ನಿವಾಸಿ ಜಿ.ನಾರಾಯಣ ಮೊಗವೀರ(63) ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News