ಸರಕಾರಿ ವಾಹನ ಬಗ್ಗೆ ಅಪಪ್ರಚಾರ ಸಲ್ಲದು: ಕಮಿಷನರ್

Update: 2019-09-11 16:31 GMT

ಮಂಗಳೂರು, ಸೆ.11: ಪೊಲೀಸ್ ಆಯುಕ್ತರ ವಾಹನದ ವಿಮೆ ನವೀಕರಣ ಆಗಿಲ್ಲ ಎಂಬುದಾಗಿ ಸಾಮಾಜಿಕ ಜಾಲದಲ್ಲಿ ಅನಾಮಧೇಯ ವ್ಯಕ್ತಿಗಳು ಹರಿಯಬಿಟ್ಟ ಸುದ್ದಿ ವೈರಲ್ ಆಗಿದ್ದು, ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್., ಸರಕಾರಿ ವಾಹನಗಳ ಬಗ್ಗೆ ಮಾಹಿತಿ ತಿಳಿಯದೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸರಕಾರಿ ವಾಹನಗಳಿಗೆ ಸರಕಾರವೇ ವಿಮೆ ಪಾವತಿಸುತ್ತದೆ. ಸರಕಾರ ವಿಮೆ ಪಾವತಿಸಿದ ವಾಹನಗಳನ್ನು ಸಾರಿಗೆ (ಪರಿವಾಹನ್) ವಾಹನಗಳ ಜತೆ ತುಲನೆ ಮಾಡುವುದು ಸರಿಯಲ್ಲ; ಏಕೆಂದರೆ ಈ ವಾಹನಗಳಲ್ಲಿ ಪ್ರಾರಂಭಿಕ ದತ್ತಾಂಶ ಮಾತ್ರ ಲಭಿಸುತ್ತಿದೆ; ನಂತರದ ನವೀಕರಣದ ಮಾಹಿತಿ ಇಲ್ಲ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News