ಮಂಜೇಶ್ವರ: ದೋಣಿ ಮಗುಚಿ ನಾಲ್ವರಿಗೆ ಗಾಯ

Update: 2019-09-11 17:19 GMT

ಮಂಜೇಶ್ವರ: ಸಮುದ್ರಕ್ಕೆ  ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರ ಮಧ್ಯೆ ಉಂಟಾದ ಬಿರುಗಾಳಿಗೆ ಸಿಲುಕಿ ಮಗುಚಿ ನಾಲ್ವರು ಗಾಯಗೊಂಡ ಘಟನೆ ಮೂಸೋಡಿ ಅದೀಕಾದಲ್ಲಿ ಬುಧವಾರ ನಡೆದಿದೆ.

ಮಂಜೇಶ್ವರ ನಿವಾಸಿಗಳಾದ ಮೊಹಮ್ಮದ್ ಕುಂಞಿ(58), ಖಾತಿಮ್(53), ಸವಾದ್(32), ಖಲೀಲ್(35) ಗಾಯಗೊಂಡಿದ್ದು ಇವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರು ಬುಧವಾರ ಮುಂಜಾನೆ ಮೀನುಗಾರಿಕೆಗೆ ದೋಣಿ ಮೂಲಕ ತೆರಳಿದ್ದರು. ಕಡಲೊಳಗೆ ಒಂದಷ್ಟು ದೂರ ಸಾಗುತ್ತಿರುವಂತೆ ಗಾಳಿ ಹಾಗೂ ಹೆದ್ದೆರೆಗೆ ಸಿಲುಕಿದ ದೋಣಿ ನಿಯಂತ್ರಣ ಕಳಕೊಂಡು ಮುಗುಚಿ ಬಿದ್ದು ಬೃಹತ್ ತಡೆಗೋಡೆಗೆ ಬಡಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News