ವಿಪರೀತ ಗಾಳಿ, ಮಳೆಗೆ ಹೊಳೆಗೆ ಬಿದ್ದು ಮೃತ್ಯು

Update: 2019-09-13 15:39 GMT

ಬೈಂದೂರು, ಸೆ.13: ವಿಪರೀತ ಗಾಳಿ ಮಳೆಯ ರಭಸಕ್ಕೆ ವ್ಯಕ್ತಿಯೊಬ್ಬರು ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಸೆ.12ರಂದು ರಾತ್ರಿ ವೇಳೆ ತೆಗ್ಗರ್ಸೆ ಗ್ರಾಮದ ದಾನಬೆಟ್ಟು ಎಂಬಲ್ಲಿ ನಡೆದಿದೆ.

ಮೃತರನ್ನು ಬಾಡಾ ಬೆಳಗಿಮನೆ ನಿವಾಸಿ ಗಣೇಶ(41) ಎಂದು ಗುರುತಿಸ ಲಾಗಿದೆ. ಚಾಲಕ ವೃತ್ತಿ ಮಾಡಿಕೊಂಡಿದ್ದ ಇವರು, ರಾತ್ರಿ ಕೆಲಸ ಮುಗಿಸಿ ಮನೆಗೆ ದಾನಬೆಟ್ಟು ಹೊಳೆಯ ದಡದಲ್ಲಿ ನಡೆದುಕೊಂಡು ಬರುತ್ತಿರುವಾಗ ವಿಪರೀತ ಗಾಳಿ ಮಳೆಯ ರಭಸಕ್ಕೆ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News