ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಣ್ಣ ವ್ಯಾಪಾರಿಗಳಿಗೆ ಉಚಿತ ತಳ್ಳುಗಾಡಿ ವಿತರಣೆ

Update: 2019-09-13 16:02 GMT

ಮಂಗಳೂರು, ಸೆ. 13: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಸಣ್ಣ ವ್ಯಾಪಾರಿಗಳಿಗೆ ಉಚಿತ ತಳ್ಳುಗಾಡಿಗಳು ಹಾಗೂ ವ್ಯಾಪಾರ ಸಾಮಾನುಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಡೆಕ್ಕನ್ ಪ್ಲಾಸ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕರಾದ ಅಸ್ಗರ್ ಹಾಜಿ, ಜನರಲ್ ಫಿಶಿಸಿಯನ್ ಡಾ. ಸುಲೈಮಾನ್, ಕಾವೂರು ಆಟೊ ವಕ್ರ್ಸ್ ಮಾಲಕರಾದ ಬದ್ರುದ್ದೀನ್ ಕೂಳೂರು, ಗುಲಾಂ ಅಬ್ದುಲ್ ಜಲೀಲ್ ಪಿ.ಡಬ್ಲ್ಯು.ಡಿ ಕಂಟ್ರಾಕ್ಟರ್, ವಿಜಯ ಕರ್ನಾಟಕ ವರದಿಗಾರರಾದ ಆರಿಫ್ ಪಡುಬಿದ್ರೆ, ಬಹರೈನ್ ಉದ್ಯಮಿ ಮೊಹಮ್ಮದ್ ಖೈಝರ್, ಮನ್ಸೂರ್ ಬಜ್ಪೆ ಮೊದಲಾದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮೂವರು ಸಣ್ಣ ವ್ಯಾಪಾರಿಗಳಿಗೆ ತಳ್ಳುವ ಗಾಡಿಗಳನ್ನು ಹಾಗೂ ಓರ್ವ ವಿಕಲಚೇತನ ಗೂಡಂಗಡಿ ವ್ಯಾಪಾರಿಗೆ ವ್ಯಾಪಾರದ ಸಾಮಾನುಗಳನ್ನು ಉಚಿತವಾಗಿ ವಿತರಿಸಲಾಯಿತು.

ಸಂಸ್ಥೆಯ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಟಿ.ಆರ್.ಎಫ್ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷ ರಿಯಾಝ್ ಕಣ್ಣೂರು ವಂದಿಸಿದರು.ಸಂಸ್ಥೆಯ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಲ್ಲಿ ಸಂಸ್ಥೆಯ ಸದಸ್ಯರಾದ ಅಬ್ದುಲ್ ಮಜೀದ್ ತುಂಬೆ, ಹುಸೈನ್ ಬಡಿಲ ಮತ್ತು ನಕಾಶ್ ಬಾಂಬಿಲ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News