ದಸಂಸ (ಅಂಬೇಡ್ಕರ್‌ವಾದ) ಜಿಲ್ಲಾ ಪದಾಧಿಕಾರಿಗಳ ಆಯ್ಕೆ

Update: 2019-09-13 16:16 GMT

ಉಡುಪಿ, ಸೆ.13: ಆದಿವುಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಮಲ್ಲೇಶ್ ಅಂಬುಗ ಹಾಸನ ಹಾಗೂ ಚಂದು ಎಲ್. ಬೆಳ್ತಂಗಡಿ ಇವರ ಉಪಸ್ಥಿತಿಯಲ್ಲಿ ಜರಗಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾಗಿ ಸುಂದರ್ ವಾಸ್ತರ್ ಅವಿರೋಧವಾಗಿ ಆಯ್ಕೆಯಾದರು.

ಉಳಿದ ಪದಾಧಿಕಾರಿಗಳ ವಿವರ ಹೀಗಿದೆ.

ಜಿಲ್ಲಾ ಸಂಘಟನಾ ಸಂಚಾಲಕರು: ಭಾಸ್ಕರ ಮಾಸ್ತರ್ ನಿಟ್ಟೂರು, ಪರಮೇಶ್ವರ ಉಪ್ಪೂರು, ಗೋಪಾಲಕೃಷ್ಣ ಕುಂದಾಪುರ, ಮಂಜುನಾಥ ಬಾಳ್ಕುದ್ರು, ಅಣ್ಣಪ್ಪ ನಕ್ರೆ ಕಾರ್ಕಳ, ಶ್ಯಾಮ್ ತೆಕ್ಕಟ್ಟೆ.

ಜಿಲ್ಲಾ ಖಜಾಂಚಿ: ಶ್ರೀಧರ ಕುಂಜಿಬೆಟ್ಟು. ಜಿಲ್ಲಾ ಸಮಿತಿ ಸದಸ್ಯರು: ಸುಂದರ್ ಗುಜ್ಜರಬೆಟ್ಟು, ಶ್ಯಾಮ್‌ರಾಜ್ ಬಿರ್ತಿ, ಎಸ್.ಎಸ್. ಪ್ರಸಾದ್, ಶ್ರೀನಿವಾಸ್ ಮಲ್ಯಾಡಿ, ರಮೇಶ್ ಕಾರ್ಕಳ, ಎಸ್.ವಿಜಯ ಶಂಕರಪುರ, ಗೋಪಾಲ ಕೊಡಂಕೂರು, ಪ್ರವೀಣ್‌ಕುಮಾರ್ ಗುಂಡಿಬೈಲು, ಪುಷ್ಪಾಕರ್ ಕೊರಂಗ್ರಪಾಡಿ, ಆನಂದ ಬ್ರಹ್ಮಾವರ.

ತಾಲೂಕು ಸಂಘಟನಾ ಸಂಚಾಲಕರು: ಅಣ್ಣಪ್ಪ ಕೊಳಲಗಿರಿ, ಗುರುರಾಜೇಶ್ ಬಂಟಕಲ್ಲು, ಶಂಕರ ಕೊಡಂಕೂರು, ಕೃಷ್ಣ ಎಲ್.ಐ.ಸಿ., ಪದ್ಮಾಕರ ಕುಂಜಿಬೆಟ್ಟು, ತಾಲೂಕು ಖಜಾಂಚಿ:ಪ್ರೇಮಾನಂದ ಬಂಟಕಲ್ಲು. ತಾಲೂಕು ಸಮಿತಿ ಸದಸ್ಯರು: ಸುರೇಶ್ ಬಂಟಕಲ್ಲು, ಶಿವರಾಮ ಭೈರಂಪಳ್ಳಿ, ಮಾರಿಮುತ್ತು ಪ್ರಗತಿನಗರ, ಕೃಷ್ಣ ನೇತಾಜಿನಗರ, ಕೃಷ್ಣ ಪಂದುಬೆಟ್ಟು, ಮೋಹನ ಚೆಂಡ್ಕಳ.

ಜಿಲ್ಲಾ ದಲಿತ ವಿದ್ಯಾರ್ಥಿ ಒಕ್ಕೂಟ: ಪ್ರಧಾನ ಸಂಚಾಲಕ ರಾಜೇಂದ್ರನಾಥ್ ಬೆಳ್ಳೆ, ಸಂಘಟನಾ ಸಂಚಾಲಕ ರಂಜಿತ್ ಎಸ್.ಆರ್. ಬಂಟಕಲ್ಲು, ವಿರೂಪಾಕ್ಷ ಸುಂಕದ.

ಜಿಲ್ಲಾ ದಲಿತ ನೌಕರರ ಒಕ್ಕೂಟ: ಪ್ರಧಾನ ಸಂಚಾಲಕ-ರಾಘವೇಂದ್ರ, ಸಂಘಟನಾ ಸಂಚಾಲಕ- ಉದಯ, ಸಿದ್ದಪ್ಪ ಮಾಸ್ತರ್. ಜಿಲ್ಲಾ ದಲಿತ ಕಲಾಮಂಡಳಿ: ಪ್ರಧಾನ ಸಂಚಾಲಕ ರವೀಂದ್ರ ಬಂಟಕಲ್ಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News