ಬೈಕ್ ಅಪಘಾತ: ಸವಾರ ಮೃತ್ಯು

Update: 2019-09-14 16:27 GMT

ಉಡುಪಿ, ಸೆ.14: ಅಂಬಾಗಿಲು-ಮಣಿಪಾಲ ರಸ್ತೆಯ ಅಕ್ಷತಾ ಹೋಟೆಲ್ ಎದುರು ಸೆ.13ರಂದು ಸಂಜೆ 7.30ರ ಸುಮಾರಿಗೆ ಎರಡು ಬೈಕ್‌ಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಗೋವಿಂದ ನಾಯ್ಕ ಎಂದು ಗುರುತಿಸಲಾಗಿದೆ. ಅಂಬಾಗಿಲು ಕಡೆಯಿಂದ ಮಣಿಪಾಲದ ಕಡೆಗೆ ಹೋಗುತ್ತಿದ್ದ ಗೋವಿಂದ ನಾಯ್ಕಿ ಅವರ ಬೈಕ್‌ಗೆ ಮಣಿಪಾಲ ಕಡೆಯಿಂದ ಅಂಬಾಗಿಲು ಕಡೆಗೆ ಬರುತ್ತಿದ್ದ ನಿಹಾಲ್ ಕಾಂಚನ್ ಎಂಬವ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಗೋವಿಂದ ನಾಯ್ಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೆ.14ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News