ಮಂಗಳೂರು: ಕ್ಯಾಂಟೀನ್‌ನಲ್ಲಿ ಕಾನ್‌ಸ್ಟೇಬಲ್ ಜತೆ ಡಿಸಿಪಿ ಊಟ

Update: 2019-09-14 16:51 GMT

ಮಂಗಳೂರು, ಸೆ.14: ಪೊಲೀಸ್ ಕಮಿಷನರ್ (ಪಿಸಿ) ಹಾಗೂ ಪೊಲೀಸ್ ಕಾನ್‌ಸ್ಟೇಬಲ್ (ಪಿಸಿ) ನಡುವೆ ಅಂತರ ಇಲ್ಲ ಎಂಬುದನ್ನು ಉಪ ಆಯುಕ್ತ ಅರುಣಾಂಶುಗಿರಿ ಶನಿವಾರ ಕಾನ್‌ಸ್ಟೇಬಲ್‌ಗಳ ಜತೆ ಊಟ ಮಾಡುವ ಮೂಲಕ ಸಾಬೀತುಪಡಿಸಿದ್ದಾರೆ.

ಕಾನೂನು ಮತ್ತು ಸುರಕ್ಷತೆ ಉಪ ಆಯುಕ್ತ ಅರುಣಾಂಶುಗಿರಿ ಅವರು ನಗರ ಸಶಸ್ತ್ರ ಮೀಸಲು ಪಡೆಯ ಕ್ಯಾಂಟೀನ್‌ನಲ್ಲಿ ಕಾನ್‌ಸ್ಟೇಬಲ್ ಜತೆ ಊಟ ಮಾಡಿದರು.

ಸೇವಾ ಕವಾಯತ್‌ನಲ್ಲಿ ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್.ಅವರು ಪೊಲೀಸ್ ಕಮಿಷನರ್ (ಪಿಸಿ) ಹಾಗೂ ಪೊಲೀಸ್ ಕಾನ್‌ಸ್ಟೇಬಲ್ (ಪಿಸಿ) ನಡುವೆ ಅಂತರ ಇಲ್ಲ ಎಂದು ಹೇಳಿದ್ದರು. ಡಿಸಿಪಿ ಅವರನ್ನು ಆಯುಕ್ತರು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News