ಸೆ. 15: ಕಲಾಯಿಯಲ್ಲಿ ರಕ್ತದಾನ ಶಿಬಿರ
Update: 2019-09-14 17:25 GMT
ಮಂಗಳೂರು: ಹಿದಾಯತುಲ್ ಇಸ್ಲಾಂ ವೆಲ್ಫೇರ್ ಎಜುಕೇಷನ್ ಕಮಿಟಿ ಕಲಾಯಿ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ.
ಕಾರ್ಯಕ್ರಮವು ಸೆ. 15ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಹಿದಾಯತುಲ್ ಇಸ್ಲಾಂ ಮದರಸ ಕಲಾಯಿಯಲ್ಲಿ ನಡೆಯಲಿದೆ ಎಂದು ಮೊಹಮ್ಮದ್ ಹಾಫಿಲ್ ಕಲಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.