ಶಿಕ್ಷಕ ಕಡ್ಡಾಯ ವರ್ಗಾವಣೆಯಲ್ಲಿ ಗೊಂದಲ ನಿವಾರಣೆಗೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2019-09-15 12:18 GMT

ಉಡುಪಿ, ಸೆ.15: ಶಿಕ್ಷಕರ ಕಡ್ಡಾಯ ವರ್ಗಾವಣೆಯಲ್ಲಿ ಕೆಲವೊಂದು ಬದ ಲಾವಣೆಗಳನ್ನು ಮಾಡುವ ಮೂಲಕ ಗೊಂದಲ ನಿವಾರಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕಾ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಉಡುಪಿ ಆದರ್ಶ ಆಸ್ಪತ್ರೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ಜಯಂತಿ ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಸ್ಪತ್ರೆಯ ಸಭಾಂಗಣ ದಲ್ಲಿ ರವಿವಾರ ಆಯೋಜಿಸಲಾದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ, ಉತ್ತಮ ನಾಗರಿಕ ಸಮಾಜವನ್ನು ಸೃಷ್ಟಿಸುವ ಶಿಕ್ಷಕರು ಆತಂಕ, ಒತ್ತಡ ರಹಿತವಾಗಿ ನಿರಾಳತೆ ಹಾಗೂ ಪ್ರೀತಿಯಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯ ಇದೆ. ರಾಜ್ಯದ ಒಟ್ಟು ಶಿಕ್ಷಕರಲ್ಲಿ ಶೇ.60ರಿಂದ 65ರಷ್ಟು ಮಹಿಳಾ ಶಿಕ್ಷಕರಿದ್ದು, ಕಡ್ಡಾಯ ವರ್ಗಾವಣೆಯಿಂದಾಗಿ ಶಿಕ್ಷಕರು ಮಾನಸಿಕ ಒತ್ತಡದಿಂದ ಕೆಲಸ ಮಾಡಬೇಕಾ ಗಿದೆ. ಈ ಎಲ್ಲ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಇಲಾಖಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಬೈಂದೂರು ವಲಯದ ಕೆ.ರಾಮಣ್ಣ ನಾಯ್ಕ, ಸೀತಾರಾಮ ಶೆಟ್ಟಿ, ಶಂಕರ ಶಿರೂರು, ಸಂತೋಷ್ ಭಂಡಾರಿ, ಪ್ರದೀಪ್ ಕುಮಾರ್ ಪಿ., ವೇದಾವತಿ, ಕುಂದಾಪುರ ವಲಯದ ಸೀತಾಲಕ್ಷ್ಮೀ, ಕಿರಣ ಕುಮಾರ್ ಬಿ., ಚಿದಾನಂದ, ಶುಭಾ ಶೇಟ್, ಬಿ.ಉದಯ ಕುಮಾರ್ ಹೆಗ್ಡೆ, ಮಹಾಬಲೇಶ್ವರ ಚಿದಂಬರಂ ಭಾಗ್ವತ್, ಬ್ರಹ್ಮಾವರ ವಲಯದ ಜಿ.ಉದಯ ಮಯ್ಯ, ಮಂಜುನಾಥ ನಾಯ್ಕಾ ಚಾಂತಾರು, ಅಭಿಲಾಷಾ ಎಸ್., ವತ್ಸಲಾ, ಕೆ. ಕಿರಣ ಹೆಗ್ಡೆ, ಭಾಸ್ಕರ ಪೂಜಾರಿ, ಕಾರ್ಕಳ ವಲಯದ ಸುಧಾಕರ ಶೆಟ್ಟಿ, ಲಕ್ಷ್ಮಣ್ ಸಾಲ್ವಂಕಾರ್, ಪೃಥ್ವಿರಾಜ್ ಬಲ್ಲಾಳ್, ಶಿವಪ್ರಸಾದ್ ಅಡಿಗ ಎಸ್., ಡಾ.ಕಾಂತಿ ಹರೀಶ್, ವಿನಯಾ, ಉಡುಪಿ ವಲಯದ ಹೆಲೆನ್ ವಿಕ್ಟೋರಿಯಾ ಸಾಲಿನ್ಸ್, ಶಕುಂತಳಾ ದೇವಿ, ಶೈಲಿ ಪ್ರೇಮಾ ಕುಮಾರಿ, ಜ್ಯೋತಿ ಲತಾ ಲೋಬೊ, ಸವಿತಾ ಎಸ್., ಸೌಮ್ಯ ಅಮೀನ್ ಇವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ, ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ.ಎನ್.ಆರ್.ರಾವ್, ನರರೋಗ ತಜ್ಞ ಪ್ರೊ.ಎ.ರಾಜಾ, ಹಿರಿಯ ಆಯು ರ್ವೇದ ತಜ್ಞ ಡಾ.ಟಿ.ಶ್ರೀಧರ ಭಾಯರಿ, ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು.

ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪ್ರಶಾಂತ್ ಶೆಟ್ಟಿ ಾವಂಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News