ಜಿಲ್ಲಾ ಎಸ್ಪಿ ಕಚೇರಿ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿ: ರಮಾನಾಥ ರೈ

Update: 2019-09-16 07:36 GMT

ಬಂಟ್ವಾಳ, ಸೆ.16: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿಯ (ಎಸ್ಪಿ) ಕಚೇರಿಯು ಸ್ಥಳಾಂತರಗೊಳ್ಳುವಂತೆ ಪ್ರಸ್ತಾವವಿದ್ದರೆ ಅದಕ್ಕೆ ಬಂಟ್ವಾಳವೇ ಸೂಕ್ತ ಪ್ರದೇಶ ಎಂದು‌ ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬಿ.ಸಿ.ರೋಡ್ ನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಪಿ ಅವರ ಕಚೇರಿ ಪೂತ್ತೂರಿಗೆ ಸ್ಥಳಾಂತರಿಸುವ ಚರ್ಚೆಯಾಗುತ್ತಿವೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿಗಳಿಗೆ ಬಂಟ್ವಾಳವೇ ಕೇಂದ್ರ ಸ್ಥಾನವಾಗಿದೆ. ಅದಲ್ಲದೆ, ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆಡಳಿತಾತ್ಮಕ ಉದ್ದೇಶದಿಂದ ವಿವಿಧೆಡೆಯಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸ್ಪಿ ಕಚೇರಿಯು  ಕಾರ್ಯಾಚರಿಸುತ್ತಿವೆ. ಅದಲ್ಲದೆ, ಮಂಗಳೂರಿನ ಕಮಿಷನರೇಟ್ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ಎಸ್ಪಿ ಕಚೇರಿಯನ್ನು ಅಲ್ಲಿಯೇ ಉಳಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.

ಆದರೆ, ಇದನ್ನು ಪುತ್ತೂರಿಗೆ ವರ್ಗಾಯಿಸುವ ರಾಜಕೀಯ ಒತ್ತಡಗಳು ಇಲಾಖೆಯ ಮೇಲಿದೆ. ಒಂದು ವೇಳೆ ಎಸ್ಪಿ ಕಚೇರಿಯನ್ನು ಸ್ಥಳಾಂತರಗೊಳಿಸುವುದಿದ್ದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬಂಟ್ವಾಳದಲ್ಲಿಯೇ ಆಗಲಿ ಎಂದು ರೈ ಒತ್ತಾಯಿಸಿದರು.

ಮೋಟಾರು ಕಾಯ್ದೆಯಿಂದ ಸವಾರರಿಗೆ ಹೊರೆ:

ಕೇಂದ್ರ ಸರಕಾರವು ಇದೀಗ ಜಾರಿಗೆ ತಂದಿರುವ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ವಾಹನಗಳಿಗೆ  ವಿಧಿಸಲಾಗುತಿರುವ ದಂಡದಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತಿವೆ ಎಂದ ರಮಾನಾಥ ರೈ, ಇದನ್ನು ಸರಳೀಕರಿಸಿಗೊಳಿಸಿ ದಂಡ ಪ್ರಮಾಣವನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ವಾಹನ ಬಿಡಿಭಾಗಗಳನ್ನು ಆಯಾ ಕಂಪೆನಿಗಳಲ್ಲಿ ಖರೀದಿಸುವ ಸುತ್ತೋಲೆ ಹೊರಡಿಸಿರುವ ಹಿನ್ನೆಲೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಿಂದ ಸ್ಥಳೀಯ ಗ್ಯಾರೇಜ್ ನಲ್ಲಿ ತಯಾರಿಸಿರುವ ವಾಹನಗಳ ಬಿಡಿಭಾಗಗಳಿಗೆ ಬೇಡಿಕೆ ಇಲ್ಲದಂತಾಗುತ್ತದೆ. ಪರಿಣಾಮ ಸಣ್ಣ ಪ್ರಮಾಣ ಗ್ಯಾರೇಜ್ ಗಳು ಮುಚ್ಚುವಂತಹ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ‌ ವ್ಯಕ್ತಪಡಿಸಿದರು.

ಹಿಂದಿ ಹೇರಿಕೆ ವಿರೋಧ:

‘ಒಂದೇ ದೇಶ, ಒಂದೇ ಭಾಷೆ’ ಘೋಷಣೆಯಡಿ ಕೇಂದ್ರ ಸರಕಾರವು ಹಿಂದಿ ಭಾಷೆಯ ಹೇರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ರೈ, ಇದರಿಂದ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಹಿಂದಿ ಕಲಿಯವುದು ಅನಿವಾರ್ಯವಿರುದರಿಂದ ಆಯಾ ಸ್ಥಳೀಯ ಭಾಷೆಗಳು ನಶಿಸಿ ಹೋಗುವ ಸಾಧ್ಯತೆ ಇದೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ನೂರಾರು ಭಾಷೆಗಳು ನಶಿಸಿ ಹೋಗಿವೆ. ಇದೇ ರೀತಿ ಮುಂದುರಿದರೆ ರಾಜ್ಯದ ಕನ್ನಡ ಭಾಷೆ ಉಳಿಯಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಮಾಣಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News