ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ತರಬೇತಿ ಕಾರ್ಯಾಗಾರ

Update: 2019-09-16 10:47 GMT

ಬಂಟ್ವಾಳ, ಸೆ. 16: ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ತಾಲೂಕು ಮಟ್ಟದ ಸಹಕಾರ ಇಲಾಖೆ ಮತ್ತು ಸಹಕಾರ ಸಂಘಗಳ ಬ್ಯಾಂಕುಗಳ/ಸೌಹಾರ್ದ ಸಹಕಾರಿಗಳ ಅಧಿಕಾರಿಗಳಿಗೆ 2019-20ನೇ ಸಾಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತಿ ಕಾರ್ಯಾಗಾರ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಸಬಾಂಗಣದಲ್ಲಿ ಸೋಮವಾರ ನಡೆಯಿತು.

ಬಂಟ್ವಾಳ ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘಗಳ ಸದಸ್ಯರ ಮಾಹಿತಿ ಪಡೆದು ಮತದಾರರ ಸೇರ್ಪಡೆ ಹಾಗೂ ತಿದ್ದುಪಡಿ ಕಾರ್ಯವನ್ನು ಅ.15ರೊಳಗೆ ಮಾಡಬೇಕು ಎಂದು ತಿಳಿಸಿದರು.

ಸರಕಾರಿ ಪಾಲಿಟೆಕ್ನಿಕ್‌ನ ಉಪನ್ಯಾಸಕ ಸನತ್ ರಾವ್ ಮತದಾರರ ಪರಿಷ್ಕರಣೆ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಪ್ರಭಾರ ಚುನಾವಣಾ ಉಪ ತಹಶೀಲ್ದಾರ್ ಸೀತಾರಾಮ ಕೆ., ಚುನಾವಣಾ ವಿಭಾಗದ ಸಿಬ್ಬಂದಿ ರಾಜಕುಮಾರ್, ಎಸ್‌ಸಿಡಿಸಿ ಬ್ಯಾಂಕ್ ಬಂಟ್ವಾಳ ಶಾಖಾ ವ್ಯವಸ್ಥಾಪಕ ವಿಜಯ್, ಬಂಟ್ವಾಳ ಕೃಷಿ ಪತ್ತಿನ ಸಹಕಾರ ಸಂಘ ಒಕ್ಕೂಟದ ಅಧ್ಯಕ್ಷ ಸುಧಾಕರ ಉಪಸ್ಥಿತರಿದ್ದರು.
ಕೆಎಂಎಫ್‌ನ ವಿಸ್ತರಣಾಧಿಕಾರಿ ಜಗದೀಶ್ ಎ. ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News