ಬೆಂಕಿ ಅಕಸ್ಮಿಕ: ಬಂಗಾಳ ಮೂಲದ ವ್ಯಕ್ತಿ ಮೃತ್ಯು

Update: 2019-09-16 16:02 GMT

ಕುಂದಾಪುರ, ಸೆ.16: ಕುಂದಾಪುರದ ಸೂರ್ನಳ್ಳಿ ಎಂಬಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸೆ.16ರಂದು  ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಪಶ್ಚಿಮ ಬಂಗಾಳ ರಾಜ್ಯದ ಸಿರಾಜುಲ್ ಇಸ್ಲಾಂ(35) ಎಂದು ಗುರುತಿಸಲಾಗಿದೆ. ಇವರು ಸೂರ್ನಳ್ಳಿ ರಸ್ತೆಯ ಬಾಡಿಗೆ ಮನೆಯಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದು ಸೆ.10ರಂದು ಚಿನ್ನದ ಕೆಲಸ ಮಾಡುತ್ತಿರುವಾಗ ಗ್ಯಾಸ್ ಮೂಲಕ ಬೆಂಕಿಯು ಆಕಸ್ಮಿಕವಾಗಿ ಅವರ ಬಟ್ಟೆಗೆ ಹಾಗೂ ಮೈಗೆ ತಾಗಿ ತೀವ್ರ ವಾಗಿ ಗಾಯಗೊಂಡರೆನ್ನಲಾಗಿದೆ.

ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖ ಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News