×
Ad

ಮಂಗಳೂರು: ಮೆದುಳಿನ ಊತದಿಂದ ಯುವಕ ಮೃತ್ಯು

Update: 2019-09-16 23:13 IST

ಮಂಗಳೂರು, ಸೆ.16: ಡೆಂಗ್ ಜ್ವರದಿಂದ ಬಾಧಿತರಾಗಿ ಚೇತರಿಸಿಕೊಂಡಿದ್ದ ನಗರದ ಬಳ್ಳಾಲ್‌ಭಾಗ್ ನಿವಾಸಿ ಯುವಕ ಚಂದ್ರಕಾಂತ (30) ಮತ್ತೆ ಆರೋಗ್ಯ ಸಮಸ್ಯೆ ಉದ್ಭವಗೊಂಡ ಕಾರಣ ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ರೈನೋ ಸೆರೆಬ್ರೆಲ್ ಮುಕೋಮಿಕೋಸಿಸ್ (ಒಂದು ರೀತಿಯ ಮೆದುಳಿನ ಊತ) ದಿಂದ ಇವರು ಮೃತಪಟ್ಟಿರುವುದಾಗಿ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಇವರು ಕಳೆದ 15 ದಿನಗಳ ಹಿಂದೆ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ಇವರು ಪೂರ್ಣ ಚೇತರಿಸಿಕೊಂಡಿದ್ದು, ಬಳಿಕ ಹೊಸ ಆರೋಗ್ಯ ಸಮಸ್ಯೆ ಉದ್ಭವಿಸಿದೆ ಎಂದು ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ ಚಂದ್ರ ಕುಲಾಲ್‌ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News