ಪಡುಬಿದ್ರಿ: ಬಾವಿಗೆ ಬಿದ್ದು ಬಾಲಕಿ ಮೃತ್ಯು

Update: 2019-09-17 16:20 GMT

ಪಡುಬಿದ್ರಿ, ಸೆ.17: ಬಾವಿಯಿಂದ ನೀರು ಸೇದುತ್ತಿದ್ದ ಬಾಲಕಿಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸೆ.16ರಂದು ಸಂಜೆ ವೇಳೆ ನಡೆದಿದೆ.

 ಮೃತರನ್ನು ಸಾಂತೂರು ಪಿಲಾರ್ ನಿವಾಸಿ ರಾಜು ಶೆಟ್ಟಿ ಎಂಬವರ ಮಗಳು ರಚನಾ ಆರ್.ಶೆಟ್ಟಿ(16) ಎಂದು ಗುರುತಿಸಲಾಗಿದೆ. ಇವರು ಮನೆಯ ಹತ್ತಿರ ಇರುವ ಉಷಾ ಶೆಟ್ಟಿ ಎಂಬವರ ಬಾವಿಯಿಂದ ನೀರು ತರಲು ಹೋಗಿದ್ದು ಆವರಣ ಇಲ್ಲದ ಬಾವಿಯಿಂದ ಕೊಡಪಾನದಲ್ಲಿ ನೀರು ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಮುಗ್ಗರಿಸಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News