ಶಿರ್ವ: ಮನೆಗೆ ನುಗ್ಗಿ ನಗನಗದು ಕಳವು

Update: 2019-09-17 16:28 GMT

ಶಿರ್ವ, ಸೆ.17: ಪಾದೂರು ಗ್ರಾಮದ ಜೈನ ಬಸದಿ ಬಳಿಯ ಮನೆಯೊಂದಕ್ಕೆ ಸೆ.16ರಂದು ಮಧ್ಯಾಹ್ನ ವೇಳೆ ನುಗ್ಗಿದ ಕಳ್ಳರು ಅಪಾರ ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

  ದೇವದಾಸ್ ಹೆಬ್ಬಾರ್ ಎಂಬವರ ಮನೆಯ ಗೋಡೆಯ ಮದ್ಯದ ವೆಂಟಿ ಲೇಟರ್ ಮೂಲಕ ಒಳನುಗ್ಗಿದ ಕಳ್ಳರು, ಪಡಶಾಲೆಯಲ್ಲಿ ಇಟ್ಟಿದ 10,000 ರೂ. ನಗದು ಹಾಗೂ ಒಳಗಿನ ಕೋಣೆಯ ಕಾಪಾಟಿನಲ್ಲಿದ್ದ 35,000ರೂ. ವೌಲ್ಯದ ಚಿನ್ನದ ಉಂಗುರ, ಚಿನ್ನದ ಬ್ರಾಸಲೇಟ್, ಚಿನ್ನದ ಕಿವಿಯ ಒಲೆ ಕಳವು ಮಾಡಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News