ಕೃಷ್ಣಾಪುರದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

Update: 2019-09-18 13:59 GMT

ಸುರತ್ಕಲ್, ಸೆ.18: ಕೃಷ್ಣಾಪುರ 7ನೇ ಬ್ಲಾಕ್‌ನಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಡಾ.ಭರತ್ ಶೆಟ್ಟಿ ವೈ. ಬುಧವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಅಂಗನವಾಡಿ ಕೇಂದ್ರ ಇಂದು ಪ್ರಾಮುಖ್ಯತೆ ಪಡೆಯುತ್ತಿದ್ದು, ಮಹಿಳೆಯರಿಗೆ ಅತೀ ಹೆಚ್ಚು ಸವಲತ್ತು ಇದೇ ಕೇಂದ್ರದಿಂದ ಸಿಗುತ್ತದೆ. ಮಕ್ಕಳಿಗೆ ಪೌಷ್ಟಿಕ ಆಹಾರವೂ ಲಭ್ಯವಿದೆ. ಇಂತಹ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಂತ ಕಟ್ಟಡ ಒದಗಿಸಲು ಪ್ರಯತ್ನಿಸಲಾಗುವುದು. ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಐದು ಅತ್ಯಾಧುನಿಕ ಅಂಗನವಾಡಿ ಕೇಂದ್ರ ಸ್ಥಾಪಿಸಲಾಗುವುದು.ಅಲ್ಲದೆ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಕಳೆದ ಹಲವು ವರ್ಷಗಳಿಂದ ಅಂಗನವಾಡಿ ನಡೆಸಲು ಮನೆಯಲ್ಲಿ ಸ್ಥಳಾವಕಾಶ ಒದಗಿಸಿ ಸಹಕರಿಸಿದ ಗೋಪಾಲ್ ಅವರನ್ನು ಸನ್ಮ್ಮಾನಿಸಲಾಯಿತು. ಮಾಜಿ ಮನಪಾ ಸದಸ್ಯರಾದ ಅಯಾಝ್ ಕೃಷ್ಣಾಪುರ, ಗುಣಶೇಖರ ಶೆಟ್ಟಿ, ಇಲಾಖೆಯ ಅಧಿಕಾರಿಗಳಾದ ಅನುಪಮಾ, ಶೋಭಾ, ಸ್ಥಳೀಯರಾದ ಶಿವಪ್ರಸಾದ್ ಶೆಟ್ಟಿ, ಹಸನ್, ಖಾಲಿದ್, ಭರತ್‌ರಾಜ್ ಕೃಷ್ಣಾಪುರ, ತಿಲಕ್‌ರಾಜ್ ಅಮೀನ್, ಸುರೇಶ್, ಲೋಕೇಶ್ ಬೊಳ್ಳಾಜೆ, ಜಯಕುಮಾರ್, ಗೋಪಾಲ್, ಗುತ್ತಿಗೆದಾರ ಕಬೀರ್, ಅಂಗನವಾಡಿ ಸಹಾಯಕಿ ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.
...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News