ಕಸ್ಬಾ ಬೆಂಗ್ರೆ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2019-09-18 14:59 GMT
ಖಾದರ್ / ಅಫ್ರಿದ್

ಮಂಗಳೂರು, ಸೆ.18: ಕಸಬಾ ಬೆಂಗ್ರೆಯ ಮನೆಯಿಂದ ನಗ- ನಗದು ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪಣಂಬೂರು ಠಾಣಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಕಸಬಾ ಬೆಂಗ್ರೆ ನಿವಾಸಿಗಳಾದ ತೌಹಿದ್ ಖಾದರ್ (18), ಮುಹಮ್ಮದ್ ಅಫ್ರಿದ್ (22) ಬಂಧಿತ ಆರೋಪಿಗಳು.

ಆರೋಪಿಗಳಿಂದ 13 ಸಾವಿರ ರೂ. ವೌಲ್ಯದ ಬಂಗಾರದ ಒಡವೆಗಳು, ಎರಡು ಸಾವಿರ ರೂ. ವೌಲ್ಯದ ಮೊಬೈಲ್, ಮೂರು ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ 50 ಸಾವಿರ ರೂ. ವೌಲ್ಯದ ಡಿಯೊ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ತಣ್ಣೀರುಬಾವಿ ಬ್ಯಾರಿಕೇಡ್ ಚೆಕ್ ಪಾಯಿಂಟ್ ಬಳಿ ಆರೋಪಿಗಳಿಬ್ಬರು ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಪೊಲೀಸರ ಸೂಚನೆ ಧಿಕ್ಕರಿಸಿ ಸ್ಕೂಟರ್ ಬಿಟ್ಟು ಪರಾರಿಯಾಗಲು ಯತ್ನಿಸಿದ್ದರು. ಕೂಡಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News