ಕಾಪು: ಎಸ್‌ಎಂಎ ನೂತನ ಉಚ್ಚಿಲ ರೀಜನಲ್ ರಚನೆ

Update: 2019-09-18 15:23 GMT

ಕಾಪು, ಸೆ.18: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಕನ್ನಂಗಾರ್ ರೀಜನಲ್ ಮತ್ತು ಉಚ್ಚಿಲ ರೀಜನಲ್ ಇದರ ಜಂಟಿ ಆಶ್ರಯದಲ್ಲಿ ವಾರ್ಷಿಕ ಕೌನ್ಸಿಲ್ ಸಭೆ ಕನ್ನಂಗಾರ್ ಬೈಪಾಸ್ ಜಮಾಲಿಯಾ ಮದರಸ ಸಭಾಂಗಣದಲ್ಲಿ ಸೆ.16ರಂದು ಜರಗಿತು.

ಅಧ್ಯಕ್ಷತೆಯನ್ನು ಹಾಜಿ ಎಂ.ಎ.ಬಾವ ಮೂಳೂರು ವಹಿಸಿದ್ದರು. ಎಸ್‌ಜೆಎಂ ಮಾಜಿ ಜಿಲ್ಲಾದ್ಯಕ್ಷ ಅಬುಬಕ್ಕರ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಸಭೆಯಲ್ಲಿ ಕನ್ನಂಗಾರ್ ರೀಜಿನಲ್ ವ್ಯಾಪ್ತಿಯನ್ನು ವಿಂಗಡಿಸಿ ನೂತನ ಉಚ್ಚಿಲ ಸಮಿತಿಯನ್ನು ಘೋಷಿಸಿ ಉಚ್ಚಿಲ ರೀಜಿನಲ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಹ್ಮದ್ ಬಾವ ವೈ.ಬಿ.ಸಿ. ಮುಳೂರು, ಉಪಾಧ್ಯಕ್ಷರುಗಳಾಗಿ ಇಬ್ರಾಹಿಮ್ ನಯೀಮಿ ಮುಳೂರು, ಪಿ.ಪಿ.ಅಬ್ಬುಲ್ ಕರೀಮ್ ಪೊಲ್ಯ, ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ.ಅಶ್ರಫ್ ರಝಾ ಅಮ್ಜದಿ ಪೊಲ್ಯ, ಕೋಶಾಧಿಕಾರಿ ಅಬ್ಬುಲ್ ಬಾರಿ ಮುಸ್ಲಿಯಾರ್ ಕೊಪ್ಪಲಂಗಡಿ, ಕಾರ್ಯದರ್ಶಿ ಶಬ್ಬೀರ್ ಇಸ್ಮಾಯಿಲ್ ಉಚ್ಚಿಲ, ಸುಲೇಮಾನ್ ಮೂಳೂರು, ಅಬ್ಬುಲ್ ಹಮೀದ್ ಯೂಸುಫ್ ಮೂಳೂರು, ಇಬ್ರಾಹಿಮ್ ತವಕ್ಕಲ್ ಉಚ್ಚಿಲ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News